ವಿಟ್ಲ : ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಡ್ತಮುಗೇರುನಲ್ಲಿ ಮನೆ ಅಂಗಳದಲ್ಲಿ ರಾತ್ರಿ ನಿಲ್ಲಿಸಿದ್ದ ಸರಕು ತುಂಬಿದ ಪಿಕಪ್ ವಾಹನವನ್ನು ಕಳ್ಳತನ ನಡೆಸಿದ ಘಟನೆ ನಡೆದಿದೆ.
ಎಂ.ಹೆಚ್.ಶಾಮಿಯಾನ ಸಂಸ್ಥೆಗೆ ಸೇರಿದ ಮಹೀಂದ್ರ ಪಿಕಪ್ ವಾಹನದಲ್ಲಿ ಕಬ್ಬಿಣದ ಸರಕುಗಳನ್ನು ತುಂಬಿಸಿ ಮಾಲಿಕ ಅನೀಸ್ ತನ್ನ ಮನೆ ಅಂಗಳದಲ್ಲಿ ಎಂದಿನಂತೆ ನಿಲ್ಲಿಸಿದ್ದರು. ಬೆಳಗ್ಗೆ ನೋಡಿದಾಗ ಪಿಕಪ್ ಕಳ್ಳತನವಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ವಾಹನದ ಬಗ್ಗೆ ಸುಳಿವು ದೊರೆತಲ್ಲಿ ವಿಟ್ಲ ಠಾಣೆಗೆ ಅಥವಾ 9986474053 ಸಂಖ್ಯೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.


























