ವಿಟ್ಲ : ಶ್ರೀ ದುರ್ಗಾ ಮಿತ್ರ ವೃಂದ ಮೈರಾ ಆಶ್ರಯದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಶ್ರೀ ದುರ್ಗಾ ಕ್ರೀಡಾಂಗಣದಲ್ಲಿ ವೃಂದದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ ರವರಿಂದ ಉದ್ಘಾಟನೆಗೊಂಡಿತು.

ಅಂಗನವಾಡಿ ಪ್ರಾಥಮಿಕ ಫ್ರೌಡಶಾಲೆ ವಿಭಾಗದ ಹುಡುಗ ಹುಡುಗಿಯರಿಗೆ ಮತ್ತು ಪುರುಷ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ಜರುಗಿದವು.
ಬೆಳಗ್ಗೆ ಲಘು ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವೃಂದದ ವತಿಯಿಂದ ಏರ್ಪಡಿಸಲಾಯಿತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ವೈಯಕ್ತಿಕ ಬಹುಮಾನ ಮತ್ತು ವಿಜೇತ ತಂಡದ ಸದಸ್ಯರಿಗೆ ಪದಕಗಳನ್ನು ನೀಡಲಾಗಿದೆ. ಸ್ಪರ್ಧಾಳುಗಳು ಮತ್ತು ವೀಕ್ಷಕ ಬಂಧುಗಳು ಹಾಜರಿದ್ದರು. ಈ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ವೃಂದದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಮುಖ ಪಾತ್ರವಹಿಸಿದರು.

ವೃಂದದ ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯುವ ಪದಾಧಿಕಾರಿಗಳಾದ ಮನೀಶ್, ಮಿಥುನ್, ಶ್ರವಣ್, ದಿವಾಕರ ಶೆಟ್ಟಿ ಬೆಂಗ್ರೋಡಿ, ಸತೀಶ್ ಕೇಪು, ವರುಣ್ ಮೈರಾ, ಬಾಲಕೃಷ್ಣ ಮೈರಾ, ರಘುನಾಥ ಮೈರಾ, ಪ್ರವೀಣ್ ಮೈರಾ, ಸಂತೋಷ್ ಕರವೀರ, ರಾಜೇಶ್ ಕರವೀರ, ಸುಧಾಕರ ಬಡೆಕೋಡಿ, ಗಿರೀಶ್ ಕಲ್ಲಪಾಪು , ಕಿರಣ್ ಕುಕ್ಕೆಬೆಟ್ಟು, ಬಾಲಕೃಷ್ಣ ಪೆಲತ್ತಡ್ಕ, ಜಗಜ್ಜೀವನ್ ರಾಮ್ ಶೆಟ್ಟಿ ಇವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತಾ ಯಶಸ್ವಿ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಿದ ಹಿರಿಯ – ಕಿರಿಯ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ವೃಂದದ ಕಾರ್ಯದರ್ಶಿ ಮಿಥುನ್ ವಂದನಾರ್ಪಣೆ ಸಲ್ಲಿಸಿದರು.



























