ಪುತ್ತೂರು : ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವೀಕ್ಷಿತ್ ರವರ ತಂದೆ ಚೆನ್ನಪ್ಪ ಗೌಡ ರವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕುರಿಯ ಗಡಾಜೆ ನಿವಾಸಿ ಚೆನ್ನಪ್ಪ ಗೌಡ ರವರು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಚೆನ್ನಪ್ಪ ಗೌಡ ರವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಬೆಂಗಳೂರಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಮಾಡಿಕೊಂಡಿದ್ದು, ಕಿರಿಯ ಮಗ ವೀಕ್ಷಿತ್ ಪುತ್ತೂರಿನ ಫಿಲೋಮಿನ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅ.9 ರಂದು ತನ್ನ ಪತ್ನಿ ಮತ್ತು ಮಗನೊಂದಿಗೆ ಊಟ ಮಾಡಿ ಮಲಗಿದ್ದು, ಮಗ ವೀಕ್ಷಿತ್ ಆತನ ಬೆಡ್ ರೂಮಿನಲ್ಲಿ ಮಲಗಿರುತ್ತಾನೆ.
ಅ.10 ರಂದು ಬೆಳಿಗ್ಗೆ ವೀಕ್ಷಿತ್ ರವರ ರೂಮಿನ ಬಾಗಿಲು ಬಡಿದಾಗ ವೀಕ್ಷಿತ್ ರವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದ ಕಾರಣ ಪತ್ನಿಯನ್ನು ಕರೆದು ಇಬ್ಬರು ಸೇರಿ ಜೋರಾಗಿ ಕರೆದಿದರೂ ವೀಕ್ಷಿತ್ ರವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದ ಕಾರಣ ಸಂಶಯಗೊಂಡು ಒಂದು ಪಿಕಾಸಿನಲ್ಲಿ ಬಾಗಿಲನ್ನು ಮೀಟಿ ಬಾಗಿಲನ್ನು ತೆಗೆದು ನೋಡಿದಾಗ ರೂಮಿನಲ್ಲಿರುವ ಫ್ಯಾನಿಗೆ
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ UDR .No: 36/2023 ಕಲo: 174 CRPC ರಂತೆ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೆ ಕಾರಣ ..!??
ಮೃತ ವೀಕ್ಷಿತ್ ತಂದೆ ನೀಡಿದ ದೂರಿನಲ್ಲಿ ಮಗ ಯಾವುದೋ ವಿಚಾರಕ್ಕೆ ಮನಸಿನಲ್ಲಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದು, ಮರಣದ ಮೇಲೆ ಯಾವುದೇ ಸಂಶಯವಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವೀಕ್ಷಿತ್ ರಾತ್ರಿ ಇನ್ಸ್ಟಾಗ್ರಾಮ್ ನಲ್ಲಿ ಸ್ನೇಹಿತೆಯ ಫೋಟೋ ಸ್ಟೋರಿ ಹಾಕಿದ್ದ ಎಂಬ ಮಾಹಿತಿ ಆತನ ಆಪ್ತ ವಲಯದಿಂದ ತಿಳಿದು ಬಂದಿದೆ.
ಎಲ್ಲದಕ್ಕೂ ಆತ್ಮಹತ್ಯೆಯೇ ಪರಿಹಾರವಲ್ಲ..!!!
ಸಮಸ್ಯೆ ಬಂದಾಗ ಯಾರೇ ಅಗಲಿ ಆತ್ಮವಿಶ್ವಾಸ ಕಳೆದುಕೊಳ್ಳದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುಲು ಮುಂದಾಗಬೇಕು. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ.
ಹದಿಹರೆಯದ ವಯಸ್ಸಿನಲ್ಲಿ ಕ್ಷುಲಕ ಕಾರಣಗಳಿಗೆ ಬೇಸರಗೊಂಡು ಸಾವಿಗೆ ಓಗೊಡುತ್ತಾರೆ. ಆದರೇ ಇಂತಹ ತಪ್ಪು ನಿರ್ಣಯ ಮತ್ತು ತಿಳುವಳಿಕೆ ಇಲ್ಲದೆ ಬದುಕನ್ನೇ ಕೊನೆಗೊಳಿಸಿದವರು ಎಷ್ಟೋ ಮಂದಿ ಇದ್ದಾರೆ.
ಇನ್ನು ಕೆಲವರು ಪ್ರೀತಿ ಕೆಟ್ಟೋಯ್ತು, ಪ್ರೀತಿಸಿದವರು ಕೈ ಕೊಟ್ರು ಎಂಬ ಕಾರಣಕ್ಕೆ ಆತ್ಮಹತ್ಯೆಯನ್ನು ಮಾಡುತ್ತಾರೆ. ಆದರೇ ಜೀವನದಲ್ಲಾಗುವ ಈ ಏರುಪೇರುಗಳಿಗೆ ತಲೆಕೆಡಿಸದೆ ಬದುಕುವುದು ಜೀವನ.
ಏನೇ ಆದರೂ ಅದೆಲ್ಲಾವನ್ನು ಸಹಿಸಿ..,ಸಾಧಿಸುವುದೇ ಜೀವನ.


























