ವಿಟ್ಲ : ಪುತ್ತಿಲ ಪರಿವಾರ ಇದರ ವಿಟ್ಲ ವಲಯ ಸಮಿತಿಯ ಸಭೆ ಕಾರ್ಯಕರ್ತರ ಮಿಲನವು ವಿಟ್ಲ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು.

ವಿಟ್ಲ ಭಾಗದ 9 ಗ್ರಾಮಗಳ ಬೂತ್ ಸಮಿತಿಯ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಅವರು ಸಂಘಟನೆಯ ಕಾರ್ಯಗಳನ್ನು ತಿಳಿಸಿದರು.

ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ, ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ರಘುರಾಮ ರೈ, ವಿಟ್ಲ ನಗರ ಸಮಿತಿ ಅಧ್ಯಕ್ಷ ಮೋಹನ ಸೇರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಾಶಿವ ಅಳಿಕೆ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿಗೆ ನಡೆದ ಭಗವತೀ ಸಹಕಾರ ಬ್ಯಾಂಕಿನ ನಿರ್ದೇಶಕ ಚುನಾವಣೆಯಲ್ಲಿ ಜಯಗಳಿಸಿದ ಪುತ್ತಿಲ ಪರಿವಾರದ ಸದಸ್ಯ ರಾಜೇಶ್ ಕರವೀರ ಅವರನ್ನು ಅರುಣ್ ಕುಮಾರ್ ಪುತ್ತಿಲ ಅವರು ಗೌರವಿಸಿದರು. ಅಲ್ಲದೇ ಪ್ರತಿ ಬೂತಿನ ಪದಾಧಿಕಾರಿಗಳಿಗೆ ಹೂವು ನೀಡಿ ಅಭಿನಂದಿಸಿದರು.

ಸಭೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ವಿಟ್ಲದಲ್ಲಿ ಶನೀಶ್ವರ ಪೂಜೆ ಮಾಡುವುದೆಂದು ತೀರ್ಮಾನಿಸಲಾಯಿತು. ಈ ಬಗ್ಗೆ ಪೂಜಾ ಸ್ವಾಗತ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳನ್ನು ಅರುಣ್ ಕುಮಾರ್ ಪುತ್ತಿಲ ಅವರು ಘೋಷಿಸಿದರು.

ಪುತ್ತಿಲ ಪರಿವಾರ ಶನೀಶ್ವರ ಪೂಜಾ ಸ್ವಾಗತ ಸಮಿತಿ
- ಅಧ್ಯಕ್ಷರು : ಶ್ರೀಕೃಷ್ಣ ( ವಕೀಲರು )
- ಗೌರವಾಧ್ಯಕ್ಷರು : ಕೃಷ್ಣಯ್ಯ ಕೆ. ಅರಮನೆ, ಸೇರಾಜೆ ಸುಬ್ರಹ್ಮಣ್ಯ ಭಟ್
- ಪ್ರಧಾನ ಕಾರ್ಯದರ್ಶಿ : ಹರೀಶ್ ಪೂಜಾರಿ ಮರುವಾಳ
- ಉಪಾಧ್ಯಕ್ಷರು : ಗಣೇಶ್ ಭಟ್ ದೇಲಂತಮಜಲು, ಶಿವಾನಂದ ವಿಟ್ಲ ( ವಕೀಲರು ), ವಸಂತ ನಾಯಕ್ ಅಜೇರು, ಭಾಸ್ಕರ ಮಡಿಯಾಲ, ಲಕ್ಷ್ಮಣ ಗೌಡ ಮಂಜಲಾಡಿ, ಜಯರಾಮ್ ಆಳ್ವ ಬದಿಯಾರು
- ಸಂಚಾಲಕರು : ಸದಾಶಿವ ಅಳಿಕೆ
- ಸಂಘಟನಾ ಕಾರ್ಯದರ್ಶಿ : ರಾಜೇಶ್ ಕರವೀರ
- ಕಾರ್ಯದರ್ಶಿಗಳು : ರವಿಶಂಕರ್ ವಿಟ್ಲ, ರವಿಶಂಕರ್ ಬಲ್ಲಾಳ್ ಎರುಂಬು, ವಿನೋದ್ ಮಾಡತ್ತಡ್ಕ, ತಿಲಕ್ ರಾಜ್ ಶೆಟ್ಟಿ ಮುಡಾಯಿಮಾರ್ ಕಂಬಳಬೆಟ್ಟು
- ಕೋಶಾಧಿಕಾರಿ : ಮೋಹನ್ ಸೇರಾಜೆ


ಮುಂದಿನ ಸಭೆಯಲ್ಲಿ ಸಮಿತಿಯ ವಿಸ್ತರಣೆ ಹಾಗೂ ಉಪ ಸಮಿತಿಗಳನ್ನು ರಚಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.



























