ಧರ್ಮಸ್ಥಳ : ಕಾರು ಶೆಡ್ಡಿನಲ್ಲಿ ನಿಲ್ಲಿಸಿದ್ದ ಕಾರನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಕಿನ್ನಿಗೋಳಿ ತಾಳಿಪ್ಪಡಿ ನಿವಾಸಿ ಅಜಯ್ (32), ಬೆಳ್ತಂಗಡಿ ಗಾಣದ ಬೆಟ್ಟು ನಿವಾಸಿ ಸೂರಜ್ ಶೆಟ್ಟಿ (23), ಬೆಳ್ತಂಗಡಿ ಇಳಂತಿಲ ನಿವಾಸಿ ಕಿಶೋರ್ ಟಿ. (32) ಬಂಧಿತರು.
ಉಳ್ಳಾಲ ನಿವಾಸಿ ಇಸಾಕ್ ಎಂ. ಎಂಬವರು ಇನ್ನೋವಾ ಕಾರಿನ ಮಾಲಕರಾಗಿದ್ದು, ಸದರಿ ಕಾರನ್ನು ಇಸಾಕ್ ರವರ ಸಂಬಂಧಿಯಾದ ನೌಫಾಲ್ ಎಂಬವರು ನ.9 ರಂದು ರಾತ್ರಿ ಆತನ ಮನೆಯಾದ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿ ಕಾರ್ ಶೆಡ್ಡಿನಲ್ಲಿ ಇರಿಸಿದ್ದು, ನ.10 ರಂದು ಬೆಳಿಗ್ಗೆ ನೋಡಿದಾಗ ಕಾರು ಶೆಡ್ಡಿನಲ್ಲಿ ಕಾಣದೇ ಇದ್ದು ಈ ಬಗ್ಗೆ ಆಸುಪಾಸುಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಕಳವಾದ ಇನ್ನೋವಾ ಕಾರಿನ ಈಗಿನ ಮೌಲ್ಯ ರೂ 2,25,000/- ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರ: 93/2023 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಕಳವು ಮಾಡಿದ ಇನ್ನೋವಾ ಕಾರನ್ನು ಧರ್ಮಸ್ಥಳ ಠಾಣಾ ಪೊಲೀಸ್ ಉಪನಿರಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತನಿಖಾ ತಂಡ ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

























