ಧರ್ಮಸ್ಥಳ : ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ನೀಡಿರುವ ದೂರಿನ ಮೇರೆಗೆ ಉದಯ ಪಿ , ಶಿವಾನಂದ ಶೆಟ್ಟಿ ಹಾಗೂ ಇತರ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆಯು ಅವರ ಗೆಳತಿಯೊಂದಿಗೆ ಡಿ.17 ರಂದು ಬೆಳ್ತಂಗಡಿಯಲ್ಲಿರುವ ಅಣ್ಣನ ಮನೆಗೆ ಬಂದಿದ್ದಾಗ, ಅಲ್ಲಿಗೆ ಎರಡು ಕಾರುಗಳಲ್ಲಿ ಬಂದ ಉದಯ ಪಿ , ಶಿವಾನಂದ ಶೆಟ್ಟಿ ಹಾಗೂ ಇತರ ಮೂರು ಮಂದಿ ಮಹಿಳೆಯ ಅಣ್ಣನ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುತ್ತಾರೆ.
ಆ ವೇಳೆ ಮಹಿಳೆ ಪ್ರಶ್ನಿಸಿದಾಗ ಮಹಿಳೆ ಹಾಗೂ ಅವರ ಗೆಳತಿಗೆ ಅವಾಚ್ಯ ಶಬ್ದಗಳಿಂದ ಬೈದು, ಮಹಿಳೆಯ ಮೈಮೇಲಿನ ಬಟ್ಟೆಯನ್ನು ಹರಿದು ಅನುಚಿತವಾಗಿ ವರ್ತಿಸಿ, ಹಲ್ಲೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 104/2023 ಕಲಂ: 448,323,354,504 ಜೊತೆಗೆ 34 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























