ಗದಗ : ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಹಿಂದೂ ಸಮಾಜದ ಯುವತಿರನ್ನ ಲವ್ ಜಿಹಾದಿಗೆ ಬಲಿಯಾಗುವುದಕ್ಕೆ ಬಿಡುವುದಿಲ್ಲ ಎಂದು ದೇವರ ಹೆಸರಲ್ಲಿ ಕ್ರಾಂತಿಸೇನಾ ಸಂಘಟನೆಯ ಮಹಿಳಾ ಸದಸ್ಯರು ಆಣೆ ಪ್ರಮಾಣ ಮಾಡಿದ್ದಾರೆ.
ಗದಗದ ಕ್ರಾಂತಿಸೇನಾ ಮಹಿಳಾ ಸಂಘಟನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮಾಣ ಸ್ವೀಕಾರ ಮಾಡಲಾಗಿದೆ.
ಲವ್ ಜಿಹಾದ್ಗೆ ಬಲಿಯಾಗಿದ್ದರೆ ಅವರನ್ನು ರಕ್ಷಣೆ ಮಾಡುತ್ತೇವೆ. ಯುವತಿಯರಿಗೆ ಹಿಂದೂ ಧರ್ಮದ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಮಹಿಳೆಯರ, ಯುವತಿಯರ ರಕ್ಷಣೆಗಾಗಿ ನಾವು ಯಾವುದೇ ಸಂಘರ್ಷಕ್ಕೂ ತಯಾರಿದ್ದೇವೆ ಎಂದು ಪ್ರಮಾಣ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಗದಗ ನಗರದಲ್ಲಿ ಕ್ಷತ್ರೀಯ ಸಮಾಜದ ಕಾರ್ಯಕ್ರಮದಲ್ಲಿ ಯುವತಿಯರಿಗೆ ಆಣೆ ಪ್ರಮಾಣ ಮಾಡಿಸಿ ಪ್ರೀತಿ ಬಲೆಯಲ್ಲಿ ಬೀಳದಂತೆ ವಚನ ತೆಗೆದುಕೊಂಡಿತ್ತು. ಈಗ ಅದೇ ಸಮಾಜದ ಕ್ರಾಂತಿಸೇನಾ ಸಂಘಟನೆಯ ಮಹಿಳಾ ಸದಸ್ಯರು ಮೊತ್ತೊಮ್ಮೆ ಶಪಥ ಮಾಡಿದ್ದಾರೆ.


























