ವಿಟ್ಲ : ವಿ.ಎಂ.ಎಫ್ ಕೊಲ್ಲಪದವು & ಬ್ರಿಗೇಡ್ ಬ್ರದರ್ಸ್ ಅಡ್ಯನಡ್ಕ ಇದರ ಆಶ್ರಯದಲ್ಲಿ ‘ಶ್ರೀ ರಾಮ ಟ್ರೋಫಿ’ ಮಾ.2-3 ರಂದು ಕೊಲ್ಲಪದವು ವಿಷ್ಣುಮೂರ್ತಿ ಮೈದಾನದಲ್ಲಿ ನಡೆಯಲಿದೆ.
ಮಾ.2 ರಂದು 9 ತಂಡಗಳ 11 ಜನರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಮಾ.3 ರಂದು 58 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದೆ.
ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಮಾ.3 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತಂಡದಿಂದ ನಾಟ್ಯ ವೇದ ಗಾನ ಸಂಭ್ರಮ ಮೂಡಿಬರಲಿದೆ.
ಈ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ‘ALL OK’ ಎಂದೇ ಪ್ರಸಿದ್ಧರಾಗಿರುವ ಕನ್ನಡದ ಪ್ರಸಿದ್ದ ರ್ಯಾಪರ್, ಗಾಯಕ, ನಟ ಮತ್ತು ಸಂಗೀತ ನಿರ್ದೇಶಕ ಅಲೋಕ್ ಆರ್ ಬಾಬು ರವರು ಆಗಮಿಸಲಿದ್ದಾರೆ.



