ಭಾರತ ಈಗ ವೇಗವಾಗಿ ಬೆಳವಣಿಗೆ ಆಗುತ್ತಿದೆ. ಭಾರತದ ಅಭಿವೃದ್ಧಿಯನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ ಅಂತ ನಟಿ ರಶ್ಮಿಕಾ ಮಂದಣ್ಣ ಅಭಿಪ್ರಾಯಪಟ್ಟಿದೆ.
ಅವರು ಇತ್ತೀಚೆಗೆ ಮುಂಬೈನ ಅಟಲ್ ಸೇತು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿರುವ ಅವರು.. ಭಾರತದ ಅಭಿವೃದ್ಧಿ ಬಗ್ಗೆ ಮೆಚ್ಚಿ ಮಾತನಾಡಿರುವ ರಶ್ಮಿಕಾ, ಭಾರತದಲ್ಲಿ ಈಗ ಅಸಾಧ್ಯವೆಂಬುದೇ ಇಲ್ಲ. ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಭಾರೀ ಅಭಿವೃದ್ಧಿ ಆಗಿದೆ. ವೇಗವಾಗಿ ಹೆದ್ದಾರಿ ನಿರ್ಮಾಣ ಆಗ್ತಿದೆ. ಹರ್ಬರ್ ಲಿಂಕ್, ಬೆಂಗಳೂರು- ಮುಂಬೈ ಹೆದ್ದಾರಿ, ಮುಂಬೈ- ಗೋವಾ ಹೆದ್ದಾರಿಗಳು ಅಭಿವೃದ್ಧಿ ಆಗಿವೆ ಎಂದಿದ್ದಾರೆ.

‘10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ’ : ನವಿ ಮುಂಬೈನಿಂದ ಮುಂಬೈಗೆ, ಗೋವಾದಿಂದ ಮುಂಬೈಗೆ ಮತ್ತು ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಈಗ ತುಂಬಾ ಸುಲಭ. ಈ ಅದ್ಭುತ ಮೂಲಸೌಕರ್ಯ ನೋಡಲು ನನಗೆ ಹೆಮ್ಮೆ ಅನಿಸುತ್ತದೆ. ಅಭಿವೃದ್ಧಿಯ ವಿಷಯದಲ್ಲಿ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತದಲ್ಲಿ ಹೀಗಾಗಲು ಸಾಧ್ಯವಿಲ್ಲ ಎಂದು ಈಗ ಯಾರೂ ಹೇಳಲಾರರು. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದಿದ್ದಾರೆ.
ಅಟಲ್ ಸೇತುವನ್ನು ಕೇವಲ ಏಳು ವರ್ಷಗಳಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದು ಆಶ್ಚರ್ಯವಾಯಿತು. ಯುವ ಭಾರತ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ. ಜನರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಚಿಂತನಶೀಲವಾಗಿ ಮತದಾನ ಮಾಡುವಂತೆ ನಟಿ ಮನವಿ ಮಾಡಿಕೊಂಡಿದ್ದಾರೆ.