ಪುತ್ತೂರು : ಮಳೆಯಿಂದಾಗಿ ಬರೆ ಕುಸಿದು ಕೊಟ್ಟಿಗೆಗೆ ಹಾನಿಯಾಗಿರುವ ಘಟನೆ ನೆಹರುನಗರ ಸಮೀಪದ ನೆಲಪ್ಪಾಲಿನಲ್ಲಿ ನಡೆದಿದೆ.

ನೆಲಪ್ಪಾಲು ವಸಂತ ಪೂಜಾರಿ ಅವರ ಮನೆ ಸಮೀಪ ಬರೆ ಕುಸಿತಗೊಂಡಿದ್ದು, ದನದ ಕೊಟ್ಟಿಗೆಗೆ ಹಾನಿಯುಂಟಾಗಿದೆ. ಘಟನೆಯಿಂದಾಗಿ ದನ ಗಾಯಗೊಂಡಿದ್ದು, ಕರು ಮೃತಪಟ್ಟಿದೆ.
ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


























