ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿ.ವೈ. ರಾಘವೇಂದ್ರ ಅವರು ಜಯಗಳಿಸಿದ್ದು, ಅರುಣ್ ಕುಮಾರ್ ಪುತ್ತಿಲ ಅವರನ್ನು ಭೇಟಿಯಾಗಿ ಅಭಿನಂದಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪ್ರಬಲ ಪೈಪೋಟಿ ನಡುವೆ ನಾಲ್ಕನೇ ಬಾರಿ ಗೆಲುವು ಕಂಡ ರಾಘವೇಂದ್ರ ಯಡಿಯೂರಪ್ಪರನ್ನು ಶಿವಮೊಗ್ಗದ ಮನೆಯಲ್ಲಿ ಭೇಟಿಯಾದ ಅರುಣ್ ಕುಮಾರ್ ಪುತ್ತಿಲ ಸಿಹಿತಿಂಡಿ ನೀಡಿ ಅಭಿನಂದನೆ ಸಲ್ಲಿಸಿದರು.
ಪುತ್ತೂರಿನ ಬಿಜೆಪಿ ಮುಖಂಡರು ಹಾಗೂ ಶಿವಮೊಗ್ಗದ ಬಿಜೆಪಿ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ರಾಘವೇಂದ್ರ ಅವರ ಪರ ಪ್ರಚಾರಕ್ಕೂ ಅರುಣ್ ಪುತ್ತಿಲ ತೆರಳಿದ್ದರು.


























