ಪುತ್ತೂರು : ಜಗದೀಶ್ ಆಚಾರ್ಯ ಪುತ್ತೂರು ಸಂಗೀತ ನಿರ್ದೇಶನ ಮತ್ತು ಗಾಯನದ ಹೊಸ ರಾಗ ಸಂಯೋಜನೆಯಲ್ಲಿ ಮೂಡಿಬಂದ ‘ಚಿಂತೆ ಯಾಕೇ ಮಾಡುತ್ತಿದ್ದಿ ಚಿನ್ಮಯನಿದ್ದಾನೆ’ ಎಂಬ ದಾಸರ ಪದ ಭಕ್ತಿಗೀತೆ ಜೂ.9.ರಂದು Jagadish_puttur ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಗೊಳ್ಳಲಿದೆ.
ಯದುನಾಥ್ ಆಳ್ವ ಅದ್ಯಪಾಡಿ ಕುವೈಟ್ ಮತ್ತು ಶಾಲಿನಿ ಯದುನಾಥ್ ಆಳ್ವ ಕುವೈಟ್ ನಿರ್ಮಾಣದಲ್ಲಿ, ಅಶ್ವಿನಿ ಕೋಳಿಕ್ಕಜೆ, ಜನ್ಯ ಪ್ರಸಾದ್ ಅನಂತಾಡಿ, ವೈಷ್ಣವಿ ಮಂಗಳೂರು, ಸಾಹಿತ್ಯ ಆಚಾರ್ಯ ಪುತ್ತೂರು ಸಹಗಾಯನದಲ್ಲಿ, ಅರುಣ್ ರೈ ಛಾಯಾಗ್ರಹಣದಲ್ಲಿ ದಾಸರ ಪದ ಭಕ್ತಿಗೀತೆ ಸೊಗಸಾಗಿ ಮೂಡಿಬಂದಿದೆ.
ಸಂಕಲನದಲ್ಲಿ ಚರಣ್ ಆಚಾರ್ಯ, ವೈ.ಟಿ ಶಿಶಿರ್ ರೈ ಚೆಲ್ಯಡ್ಕ ಸಹಕರಿಸಿದ್ದಾರೆ.