ದಾವಣಗೆರೆ : ಡೆಂಘೀ ಜ್ವರಕ್ಕೆ ವಿದ್ಯಾರ್ಥಿನಿ ಬಲಿಯಾದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.
ಅನುಷಾ (18) ಸಾವನ್ನಪ್ಪಿದ ಯುವತಿ.
ಅನುಷಾ ಜ್ವರದಿಂದ ಬಳಲುತ್ತಿದ್ದಳು. ಕಳೆದ ಶನಿವಾರ ಮಣಿಪಾಲ್ ಆಸ್ಪತ್ರೆಗೆ ದಾಖಲು ಆಗಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಯುವತಿ ಸಾವನ್ನಪ್ಪಿದ್ದಾಳೆ.
ಪಿಯುಸಿ ಮುಗಿಸಿದ ಯುವತಿ ಅನುಷಾ ಇಂಜಿನಿಯರಿಂಗ್ ಮಾಡುವ ಕನಸು ಹೊಂದಿದ್ದಳು. ಆದರಿಂದು ಚಿಕಿತ್ಸೆ ಫಲಿಸದೆ ಅನುಷಾ ಸಾವನ್ನಪ್ಪಿದ್ದಾಳೆ.


























