ಪುತ್ತೂರು : ಬಪ್ಪಳಿಗೆ ಸಿಂಗಾಣಿ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತ, ಕ್ರಿಕೆಟ್ ಆಟಗಾರ ಚಂದ್ರಶೇಖರ್ ಬಪ್ಪಳಿಗೆ ಅನಾರೋಗ್ಯದಿಂದಾಗಿ ನಿಧನರಾದರು.
ಚಂದ್ರಶೇಖರ್ ನಿನ್ನೆ ಅನಾರೋಗ್ಯಕ್ಕೊಳಗಾಗಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರ ಅಸೌಖ್ಯಗೊಂಡ ಹಿನ್ನಲೆ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಮೃತರು ಪತ್ನಿ, ಪುಟ್ಟ ಮಗು, ತಂದೆ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಮೃತರ ಮನೆಗೆ ಕಾಂಗ್ರೆಸ್ ಪ್ರಮುಖರಾದ ಕೃಷ್ಣ ಪ್ರಸಾದ್ ಆಳ್ವ, ನಿಹಾಲ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಮಹಮ್ಮದ್ ಅಲಿ, ರೋಶನ್ ರೈ, ರಿಯಾಜ್ ಪರ್ಲಡ್ಕ ಭೇಟಿ ನೀಡಿ ಸಂತಾಪ ಸೂಚಿಸಿದರು.
ಶಾಸಕ ಅಶೋಕ್ ಕುಮಾರ್ ರೈ, ಪದ್ಮರಾಜ್ ಆರ್. ಪೂಜಾರಿ ಅವರು ಬೆಂಗಳೂರಿನಲ್ಲಿರುವ ಕಾರಣ ಚಂದ್ರಶೇಖರ್ ರವರ ಕುಟುಂಬಸ್ಥರ ಜೊತೆ ಮೊಬೈಲ್ ಕರೆ ಮೂಲಕ ಮಾತನಾಡಿ, ಸಾಂತ್ವನ ಹೇಳಿದರು.