ಮಂಗಳೂರು : ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಇಂದು ಮಂಗಳೂರಿಗೆ ಭೇಟಿ ನೀಡಿದ್ದು, ಈ ವೇಳೆ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ರವರು ಪುತ್ತೂರು ರೈಲ್ವೇ ನಿಲ್ದಾಣ ಹಾಗೂ ರೈಲ್ವೇ ಮಾರ್ಗದಲ್ಲಾಗಬೇಕಾದ ಅಗತ್ಯ ಕೆಲಸಗಳ ಬಗ್ಗೆ ಮನವಿ ನೀಡಿದರು.
ಕಬಕ ಪುತ್ತೂರು ಆದರ್ಶ ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ಗೆ ಮಳೆ ಹಾಗೂ ಬಿಸಿಲಿಗೆ ರಕ್ಷಣೆ ನೀಡಲು ಶೆಲ್ಟರ್ ವ್ಯವಸ್ಥೆ., ಕಬಕ ಪುತ್ತೂರು ಆದರ್ಶ ರೈಲ್ವೆ ಸ್ಟೆಷನ್ ಗೆ ಸಿಸಿಟಿವಿ ವ್ಯವಸ್ಥೆ, ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಹೋದಾಗ ಜನರೇಟರ್ ವ್ಯವಸ್ಥೆ, ಕಬಕ ಪುತ್ತೂರು ಆದರ್ಶ ರೈಲ್ವೆ ಸ್ಟೇಷನ್ನಲ್ಲಿ ಪ್ರಯಾಣಿಕರ ರೈಲು ಕೇವಲ 2 ನಿಮಿಷ ತಂಗುವ ಬದಲು ಕನಿಷ್ಠ 5 ನಿಮಿಷ ತಂಗುವ ವ್ಯವಸ್ಥೆ ಆಗಬೇಕು. ಮಂಗಳೂರು-ಕಬಕ-ಪುತ್ತೂರು ಬೆಳಿಗ್ಗೆ 6.40ಕ್ಕೆ ಬರುವ ಪ್ರಯಾಣಿಕ ರೈಲನ್ನು ಸುಬ್ರಹ್ಮಣ್ಯ ತನಕ ವಿಸ್ತರಣೆ ಮಾಡಬೇಕು. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸಾಮೆತ್ತಡ್ಕ ಹಾಗೂ ಪುತ್ತೂರು ಕ್ಲಬ್ ಇಲ್ಲಿರುವ ರೈಲು ಕ್ರಾಸಿಂಗ್ ಇದಕ್ಕೆ ಓವರ್ ಬ್ರಿಡ್ಜ್ ಅಥವಾ ಅಂಡರ್ ಬ್ರಿಡ್ಜ್ ಮಾಡಬೇಕು ಎಂಬ ಬೇಡಿಕೆಗಳ ಮನವಿಯನ್ನು ಮಾಜಿ ಶಾಸಕರು ಕೇಂದ್ರ ಸಚಿವರ ಮುಂದಿಟ್ಟಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕೇಂದ್ರ ಸಚಿವರು ಪ್ರತಿಕ್ರಿಯಿಸಿದರು.
ಪಕ್ಷದ ಪ್ರಮುಖರು, ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.