ವಿಟ್ಲ : ಕೆಲವೊಂದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾದಂತೆ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಅಧ್ಯಕ್ಷರಾದ ಗೀತಾನಂದ ಶೆಟ್ಟಿ ಅವರು ತಿಳಿಸಿದ್ದಾರೆ.
ಕೆಲವೊಂದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವರದಿಯಾದಂತೆ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಹಾಗೂ ಲೆಕ್ಕ ಪರಿಶೋಧಕದ ವರದಿ ಸಮಪ೯ಕವಾಗಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿರುತ್ತದೆ. ಸ.15 ಆದಿತ್ಯವಾರ ನಡೆದ ಮಹಾಸಭೆಯಲ್ಲಿ ಕೆಲವು ಸದಸ್ಯರು ಅನಾವಶ್ಯಕ ಪ್ರಶ್ನೆಗಳನ್ನು ಕೇಳಿ ಸಭೆಯನ್ನು ಗೊಂದಲಕ್ಕೀಡು ಮಾಡಿದರು. ಅವರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದು, ಸಂಘದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿರುವುದಿಲ್ಲ ಎಂದು ಹೇಳಿದರು.
ಸಂಘದ ವಾರ್ಷಿಕ ವರದಿಯನ್ನು ಗಮನಿಸಿದರೆ ವರ್ಷವಾರು ಸಂಘದ ಆದಾಯ ಮತ್ತು ಲಾಭವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಬಂದಿದೆ. ಲೆಕ್ಕ ಪರಿಶೋಧನಾ ವರದಿಯಲ್ಲಿ ಸಂಘವು ಸತತವಾಗಿ “ಎ” ಗ್ರೇಡ್ ಪಡೆದುಕೊಂಡಿರುತ್ತದೆ. ಸಂಘವು ಆಥಿ೯ಕವಾಗಿ ಬಲಿಷ್ಠವಾಗಿದ್ದು, ಅತ್ಯಂತ ಯಶಸ್ಸಿನಿಂದ ಮುಂದುವರಿದುಕೊಂಡು ಬಂದಿದೆ.
ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿ ಬಂದಿರುತ್ತದೆ. 2023-2024ನೇ ಸಾಲಿನಲ್ಲಿ ಸುಮಾರು 65 ಲಕ್ಷಕ್ಕಿಂತಲೂ ಮೇಲೆ ನಿವ್ವಾಳ ಲಾಭ ಗಳಿಸಿದ್ದು 12% ಡಿವಿಡೆಂಡ್ ಕೊಡಲು ಮಹಾಸಭೆಯಲ್ಲಿ ನಿಧ೯ರಿಸಿದ್ದೇವೆ. ಲೆಕ್ಕ ಪರಿಶೋಧಕರು 2023-2024ನೇ ಸಾಲಿಗೆ ಸಂಬಂಧಿಸಿದಂತೆ ತಮ್ಮ ಸವಿವರವಾದ ವರದಿಯನ್ನು ಸಲ್ಲಿಸಿದ್ದು ಅದರ ವಿಸ್ತಾರವಾದ ಲಾಭ-ನಷ್ಟ, ಆಸ್ತಿ ಜವಾಬ್ದಾರಿ ಹಾಗೂ ಜಮಾ-ಖಚು೯ ಖಾತೆ ಇದ್ದು ಮಹಾಸಭೆಯ ನೋಟಿಸನ್ನು ನೀಡುವಾಗ ಇದನ್ನು ಸಂಕ್ಷಿಪ್ತಗೊಳಿಸಿ ವಾಡಿಕೆಯಂತೆ ಮುದ್ರಿಸಲಾಗಿರುತ್ತದೆ. ಇದ್ದರಿಂದ ಕೆಲವು ಸದಸ್ಯರಿಗೆ ಕೆಲವೊಂದು ಅಂಕಿ ಅಂಶಗಳಲ್ಲಿ ಗೊಂದಲ ವಾಗಿರುವುದು ಸಹಜ. ಲೆಕ್ಕ ಪರಿಶೋಧಕರು ಸಹಿ ಮಾಡಿದ ಹಣಕಾಸಿನ ವರದಿಯಲ್ಲಿ ಯಾವುದೇ ರೀತಿಯ ತಪ್ಪುಗಳು ಇರುವುದಿಲ್ಲ, ಆದ್ದರಿಂದ ನಾನು ಈ ಮೂಲಕ ವಿನಂತಿಸುವುದೇನೆಂದರೆ ಸವಿವರವಾದ ಲೆಕ್ಕ ಪರಿಶೋಧಕ ವರದಿ ಸಂಘದ ಕೇಂದ್ರ ಕಛೇರಿಯಲ್ಲಿ ಲಭ್ಯವಿದ್ದು ಎಲ್ಲಾ ಸದಸ್ಯರ ವೀಕ್ಷಣೆಗೆ ದೊರಕುತ್ತದೆ. ಸದಸ್ಯರು ವಾಷಿ೯ಕ ವರದಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಮಪ೯ಕವಾದ ಉತ್ತರವನ್ನು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ನೀಡಲು ಸಿದ್ಧರಿದ್ದು, ಸಂಘದ ಸದಸ್ಯರು, ಠೇವಣಿದಾರರು ಮತ್ತು ಸಾರ್ವಜನಿಕರು ಯಾವುದೇ ರೀತಿಯ ಉಹಾಪೋಹಗಳಿಗೆ ಕಿವಿಗೊಡದೆ ಇದೋಂದು ರಾಜಕೀಯ ಪ್ರೇರಿತ ಹೇಳಿಕೆಯಾಗಿದ್ದು ಮಾದ್ಯಮ ಹಾಗೂ ಸಾಮಾಜಜಾಲತಾಣದಲ್ಲಿ ವರದಿಯಾಗಿರುವುದು ಸುಳ್ಳು ಮಾಹಿತಿಯಾಗಿರುತ್ತದೆ. ಸಂಘದ ಬಗ್ಗೆ ಸುಳ್ಳು ಸುದ್ದಿ ಮಾಹಿತಿಯನ್ನು ಹಬ್ಬಿಸುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.