ಬಂಟ್ವಾಳ : ಸಂಬಂಧಿಕರ ಮನೆಗೆ ಹೋಗುವುದಾಗಿ ಮನೆಯಿಂದ ಹೊರಗೆ ಹೋದ ಹದಿಹರೆಯದ ಯುವತಿಯೋರ್ವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಆಕೆಯ ತಾಯಿ ಗಿರಿಜಾ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ನಿವಾಸಿ ಗಿರಿಜ ಅವರ ದ್ವೀತಿಯ ಪುತ್ರಿ ಹರ್ಷಿತಾ (18) ಕಾಣೆಯಾದ ಯುವತಿ.
ಹರ್ಷಿತಾ ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಿ ಮನೆಯಲ್ಲಿದ್ದಳು. ಸೆ.16 ರಂದು ರಾತ್ರಿ ಎಂದಿನಂತೆ ಊಟ ಮಾಡಿ ರಾತ್ರಿ 11.30 ರ ಗಂಟೆಗೆ ಸಮೀಪವಿರುವ ಅಕ್ಕನಾದ ಜಯಂತಿ ಅವರ ಮನೆಗೆ ಹೋಗುವುದಾಗಿ ತಿಳಿಸಿ ಹೋಗಿದ್ದಳು. ಬೆಳಿಗ್ಗೆ ಬರುವುದಾಗಿ ತಿಳಿಸಿ ಹೋಗಿದ್ದ ಯುವತಿ ಬಾರದೆ ಇದ್ದಾಗ ಅವರ ಮನೆಗೆ ತೆರಳಿ ವಿಚಾರಿಸಿದಾಗ ಅವಳು ಮನೆಗೆ ಬಂದಿಲ್ಲವೆಂದು ತಿಳಿಸಿದ್ದಾರೆ.
ಕಾಣೆಯಾದ ಹರ್ಷಿತಾ ಸೆ.4 ರಂದು ಮನೆಯಲ್ಲಿ ಯಾರಿಗೂ ಹೇಳದೆ ಹೋಗಿದ್ದು, ಮರುದಿನ ಬಂದಿದ್ದಳು. ಆ ವೇಳೆ ವಿಚಾರಿಸಿದಾಗ ಅವಳ ಸ್ನೇಹಿತೆ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದಳು. ಹಾಗಾಗಿ ಈ ಬಾರಿಯೂ ಅವಳ ಮನೆಗೆ ತೆರಳಿರಬಹುದು ಎಂದು ಅಂದಾಜಿಸಿ ಅವಳಲ್ಲಿ ವಿಚಾರಿಸಿದಾಗ ಅಲ್ಲಿಗೂ ಬಂದಿಲ್ಲ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.