ಪುತ್ತೂರು : ಅಕ್ಷಯ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯನ್ನು ಎನ್.ಎಸ್.ಎಸ್. ಘಟಕಗಳ ನೇತೃತ್ವದಲ್ಲಿ ಕಾಲೇಜಿನ ಆಂತರಿಕಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.
ಎನ್.ಎಸ್.ಎಸ್. ದಿನಾಚರಣೆಯನ್ನು ಡಾ.ಹರಿಪ್ರಸಾದ್ ಎಸ್. ಸಹಪ್ರಾಧ್ಯಾಪಕರು ವಾಣಿಜ್ಯವಿಭಾಗ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಉಪ್ಪಿನಂಗಡಿ ಇವರು ದೀಪಬೆಳಗಿಸಿ ಉದ್ಘಾಟಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯವ್ಯಾಪ್ತಿಯಲ್ಲಿ ಪ್ರಸ್ತುತ ವ್ಯಕ್ತಿತ್ವ ವಿಕಸನಕ್ಕೆ ಒತ್ತುನೀಡಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಹ ಕೆಲಸಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಸೇವಾಯೋಜನೆಯು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಬೆಳೆಸಿ ಸಾಮಾಜಿಕ ಪ್ರತಿಬದ್ಧತೆಯನ್ನು ಕಾಪಾಡಲು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಸೇವಾಯೋಜನೆಯ ವಿಶೇಷ ಪುರಸ್ಕಾರ, ಅತ್ಯುತ್ತಮ ಸ್ವಯಂಸೇವಕ ಮತ್ತು ಸ್ವಯಂಸೇವಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 2021- 23ರ ಸಾಲಿನ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿಯನ್ನು ರೋಹಿತ್ಮತ್ತು ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿಯನ್ನು ವಿದ್ಯಾಶ್ರೀ ಪಡೆದರು. 2022- 23ರ ಸಾಲಿನ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿಯನ್ನು ಕೀರ್ತನ್ಮತ್ತು ಅತ್ಯುತ್ತಮ ಸ್ವಯಂಸೇವಕಿ ದೀಕ್ಷಾ ಪಡೆದರು.
2023- 24 ಸಾಲಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವೇದಿಕೆಯಲ್ಲಿನ ಗಣ್ಯರು ವಿತರಿಸಿದರು.
ಮುಖ್ಯಅತಿಥಿಯಾಗಿ ಕಾಲೇಜಿನ ಹಳೆವಿದ್ಯಾರ್ಥಿನಿ ಪ್ರಣಮ್ಯ ಸಿಎ, ಹಿರಿಯ ಸ್ವಯಂ ಸೇವಕಿ, ಅಂತರರಾಷ್ಟ್ರೀಯ ಯೋಗಪಟು ಮತ್ತು ವಿಶ್ವವಿದ್ಯಾನಿಲಯದ ಪ್ರಥಮರ್ಯಾಂಕ್
ವಿಜೇತೆ ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ ರವರು ನಿರ್ವಹಿಸಿ, ತಮ್ಮ ಅನುಭವವನ್ನು ಹಂಚಿಕೊಂಡು, ರಾಷ್ಟ್ರೀಯ ಸೇವಾ ಯೋಜನೆಯು ವ್ಯಕ್ತಿಯ ಪರಿಪೂರ್ಣ ಬದುಕಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಅದೆಷ್ಟೋ ವಿಷಯಗಳನ್ನು ನಾವು ನಮಗೆ ಅರಿವಿಲ್ಲದೆ ನಿರಂತರವಾಗಿ ಕಲಿಯುತ್ತೇವೆ. ಈ ಯೋಜನೆಯು ಬದುಕಿಗೆ ಒಂದು ಉತ್ತಮಪಾಠವನ್ನು ಕಲಿಸುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಆಡಳಿತಾಧಿಕಾರಿಯಾದ ಅರ್ಪಿತ್ ಟಿ.ಎ., ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ರಾಷ್ಟ್ರವ್ಯಾಪ್ತಿ ಒಂದು ಯೋಜನಾ ಬದ್ಧ ಸಂಘಟನೆಯಾಗಿದ್ದು, ಸಾಮಾಜಿಕ ಕಳಕಳಿಗೆ ಸ್ಪಂದಿಸಿ ವ್ಯಕ್ತಿವಿಕಸನದೊಂದಿಗೆ ಸಾಮಾಜಿಕಪರಿವರ್ತನೆಗೆ ಪಣತೊಟ್ಟ ಯುವಸಮೂಹವಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಅತಿಥಿಗಳಿಗೆ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿ ಸ್ಮರಣಿಕೆ ನೀಡಿ ಗೌರವಿಸಿದರು. ರಾಷ್ಟ್ರೀಯ ಸೇವಾಯೋಜನೆಯ ಘಟಕ 2ರ ಕಾರ್ಯಕ್ರಮಮಾಧಿಕಾರಿ ಮೇಘಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಕೃತಿ ರಾಷ್ಟ್ರೀಯಸೇವಾ ಯೋಜನೆಯ ಸ್ವಯಂಸೇವಕಿ ಪ್ರಾರ್ಥಿಸಿದರು. ಉದ್ಘಾಟಕರ ಕಿರುಪರಿಚಯವನ್ನು ಘಟಕ 1ರ ನಾಯಕಿ ವರ್ಷಿಣಿ ಮಾಡಿದರು. ಮುಖ್ಯಅತಿಥಿಯಾದ ಪ್ರಣಮ್ಯ ಸಿಎ ರವರ ಕಿರುಪರಿಚಯವನ್ನು ರಾಕೇಶ್ (ಘಟಕ 1ರ ನಾಯಕ) ಮಾಡಿದರು. ಶ್ರುತಿ ( ಘಟಕ 2ರ ನಾಯಕಿ) ಸ್ವಾಗತಿಸಿ, ಅಖಿಲೇಶ್ (ಘಟಕ 2 ರನಾಯಕ) ವಂದಿಸಿದರು.
ವಿಂಧುಶ್ರೀ ಸ್ವಯಂಸೇವಕಿ ರಾಷ್ಟ್ರೀಯ ಸೇವಾಯೋಜನೆ ಕಾರ್ಯಕ್ರಮವನ್ನು ನಿರೂಪಿಸಿದರು.