ಪುತ್ತೂರು : ಎಪಿಎನ್ ಕ್ರಿಯೇಷನ್ಸ್ ಕೆಮ್ಮಿಂಜೆ ಪುತ್ತೂರು ಇದರ ವತಿಯಿಂದ ಏರ್ಪಡಿಸಲಾದ ಮುದ್ದುಕೃಷ್ಣ ಫೋಟೋಸ್ಪರ್ಧೆ ಮತ್ತು ಕ್ಯೂಟ್ ಕಪಲ್ ಫೋಟೋ ಸ್ಪರ್ಧೆಗೆ ನಿಗದಿಪಡಿಸಿದ್ದ ನೋಂದಣಿ ಶುಲ್ಕದಲ್ಲಿ ಬಹುಮಾನದ ಖರ್ಚುವೆಚ್ಚಗಳನ್ನು ಕಳೆದು ಉಳಿದಂತಹ ಮೊತ್ತ 20000 ರೂಪಾಯಿಗಳನ್ನು ಇಬ್ಬರಿಗೆ ತಲಾ 10 ಸಾವಿರ ರೂಪಾಯಿಯಂತೆ ಪ್ರವೀಣ್ ನಾಯಕ್ ಹಸ್ತಾಂತರಿಸಿದರು.
ಅಸಹಾಯಕ ಪರಿಸ್ಥಿತಿಯಲ್ಲಿರುವ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ನಿವಾಸಿ ಶ್ರೀಧರ್ ಗೌಡ, ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವ ತಾಯಿಯೊಂದಿಗೆ ವಾಸಿಸುತ್ತಿದ್ದು, ಅವರು ಕಬಡ್ಡಿ ಆಟದಲ್ಲಿ ಕಾಲಿಗೆ ಆದಂತಹ ಗಾಯದಿಂದ 12 ವರ್ಷಗಳಿಂದ ಎದ್ದು ಓಡಾಡಲು ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದಾರೆ. ಎರಡು ತಿಂಗಳ ಹಿಂದೆಯೇ ಇವರ ಅಸಹಾಯಕ ಪರಿಸ್ಥಿತಿ ಗಮನಕ್ಕೆ ಬಂದ ಹಿನ್ನಲೆ ಉಳಿತಾಯ ಮೊತ್ತದಲ್ಲಿ 10000 ರೂಪಾಯಿಗಳನ್ನು ಶ್ರೀಧರ್ ಗೌಡ ಅವರಿಗೆ ಹಸ್ತಾಂತರಿಸಲಾಯಿತು.
ಪರಿಸ್ಥಿತಿಯಲ್ಲಿರುವ ಇನ್ನೋರ್ವ ಬಂಟ್ವಾಳ ತಾಲೂಕು ವಿಟ್ಲ ನಿವಾಸಿ 25 ವರ್ಷ ವಯಸ್ಸಿನ ಪ್ರಜ್ವಲ್ ಕುಲಾಲ್ ರವರಿಗೆ ನೀಡಲಾಯಿತು. ತಾಯಿಯೊಂದಿಗೆ ವಾಸಿಸುತ್ತಿರುವ ಪ್ರಜ್ವಲ್ ಕುಲಾಲ್ ಅವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಅದರ ಸೈಡ್ ಎಫೆಕ್ಟ್ ಕಾರಣದಿಂದ ಶ್ವಾಸಕೋಶದಲ್ಲಿ ನೀರು ತುಂಬಿ ಅದಕ್ಕೂ ಸಣ್ಣ ಸರ್ಜರಿ ಮಾಡಲಾಗಿದೆ. ಅಸಹಾಯಕ ಪರಿಸ್ಥಿತಿ ಗಮನಕ್ಕೆ ಬಂದಿದ್ದು, ಉಳಿತಾಯ ಮೊತ್ತದಲ್ಲಿ 10000 ರೂಪಾಯಿಗಳನ್ನು ಪ್ರಜ್ವಲ್ ಕುಲಾಲ್ ಅವರಿಗೆ ಹಸ್ತಾಂತರಿಸಲಾಯಿತು.