ಸುಬ್ರಹ್ಮಣ್ಯ : ಸಾಲ ನೀಡಿದ ಹಣವನ್ನು ವಾಪಾಸ್ಸು ಕೇಳಿದ ಹಿನ್ನಲೆ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೇನೆಕಲ್ಲು ಸಂಕಡ್ಕ ನಿವಾಸಿ ಉಮೇಶ್ ಗೌಡ ಎಂಬವರು ನೀಡಿದ ದೂರಿನಂತೆ ಶ್ರವಣ ನೀರ್ಕಜೆ, ಆನಂದ್ ಗೌಡ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಯೇನೆಕಲ್ಲು ಸಂಕಡ್ಕ ನಿವಾಸಿ ಉಮೇಶ್ ಗೌಡ ಪತ್ನಿಯೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದು, ಸೆ.12 ರಂದು ಮನೆಯಿಂದ ಅಂಗಡಿಗೆ ದಿನಸಿ ಸಾಮಾನು ತರಲು ಹೋದ ವೇಳೆ ಪರಿಚಯದ ನೆಕ್ರಾಜೆಯ ಶ್ರವಣ್ ಅಂಗಡಿಗೆ ಬಂದಿದ್ದು, ಶ್ರವಣ್ ಉಮೇಶ್ ಗೌಡರಿಂದ ಪಡೆದುಕೊಂಡಿದ್ದ ಕೈ ಸಾಲ 1000 ರೂ. ಅನ್ನು ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು, ನಿನ್ನ ದುಡ್ಡು ಕೊಡುವುದಿಲ್ಲ., ನೀನು ಮಾಡುವುದನ್ನು ಮಾಡು’ ಎಂದು ಶರ್ಟ್ ಕಾಲರ್ ಹಿಡಿದಿದ್ದು, ಬಳಿಕ ಅಲ್ಲಿದ್ದವರು ಬಿಡಿಸಿದ್ದು, ಬಳಿಕ ಉಮೇಶ್ ಗೌಡ ರವರ ಮನೆ ಸಮೀಪ ಬಂದ ಶ್ರವಣ್ ಹಾಗೂ ಆತನ ತಂದೆ ಆನಂದ್ ಗೌಡ ಹಾಗೂ ಮತ್ತೋರ್ವ ಜಗಳ ನಡೆಸಿ, ಹಲ್ಲೆ ಮಾಡಿದ್ದು, ಬೊಬ್ಬೆ ಕೇಳಿ ಉಮೇಶ್ ರವರ ಅಣ್ಣನ ಮನೆಯವರು ಬಂದ ವೇಳೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023 (U/S-329(4), 352, 115 (2), 118 (1), 118(2), 351 (2), 3 (5) ರಂತೆ ಪ್ರಕರಣ ದಾಖಲಾಗಿದೆ.