ವಿಟ್ಲ : ಶ್ರೀದೇವಿ ಯುವಕ ಸಂಘ (ರಿ) ಸೆರ್ಕಳ ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಶಾರದಾ ಹುಲಿ ಶ್ರೀದೇವಿ ಟೈಗರ್ಸ್ ಸೆರ್ಕಳ ಇದರ ಊದು ಪೂಜಾ ಕಾರ್ಯಕ್ರಮವು ಸೆರ್ಕಳ ಶ್ರೀ ಮಹಮ್ಮಾಯಿ ಅಮ್ಮನವರ ಸನ್ನಿಧಿಯಲ್ಲಿ ನಡೆಯಿತು.
ಅತಿಥಿಗಳಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅಕ್ಷಯ್ ರಜಪೂತ್, ಮಹಮ್ಮಾಯಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕುಶಾಲಪ್ಪ ಅಮ್ಟೂರು, ಉಮೇಶ್ ಅಮ್ಟೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು 22 ಹುಲಿವೇಷದಾರಿಗಳು ಸಾಂಪ್ರದಾಯಿಕ ಹುಲಿವೇಷವನ್ನು ಹಾಕಿದ್ದರು.