ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಗೆ ಶಾಸಕ ಅಶೋಕ್ ರೈ ಅವರ ಶ್ರಮ ಬಹಳ ದೊಡ್ಡದಿದೆ. ಅವರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಅವರು ಇದೀಗ ಮೆಡಿಕಲ್ ಕಾಲೇಜಿನ ಘೋಷಣೆ ಮಾಡಿದ್ದಾರೆ. ಶಾಸಕನಾದ ಬಳಿಕ ಪ್ರತಿಯೊಂದು ಭಾಷಣದಲ್ಲಿಯೂ ಮೆಡಿಕಲ್ ಕಾಲೇಜಿನ ಪ್ರಸ್ತಾಪ ಮಾಡುತ್ತಿದ್ದ ಅಶೋಕ್ ರೈ ಅವರು ಅದಕ್ಕಾಗಿ ಬೆಂಗಳೂರಿನ ಕಚೇರಿ ಕಚೇರಿಗಳನ್ನು ಅಲೆದಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರನ್ನು ಇನ್ನಿಲ್ಲದೆ ಕಾಡಿದ್ದಾರೆ.
ಪ್ರತಿಫಲವಾಗಿ ಇದೀಗ ರೈ ಪಾಲಿಗೆ ದೊರೆತಿದೆ `ಪೂಜಾಫಲ’
ಪುತ್ತೂರಿನಲ್ಲೊಂದು ಮೆಡಿಕಲ್ ಕಾಲೇಜು ಅಗತ್ಯವಿದೆ ಎಂಬ ಚಿಂತನೆ ಆರಂಭಗೊAಡಿರುವುದು ದಶಕಗಳ ಹಿಂದೆ. ಇದಕ್ಕೆ ಪೂರಕವಾಗಿ ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಅವರು ಭವಿಷ್ಯದ ಮೆಡಿಕಲ್ ಕಾಲೇಜಿಗಾಗಿ ಜಾಗವನ್ನು ಕಾದಿರಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.7ರಂದು ರಾಜ್ಯ ಬಜೆಟ್ ಮಂಡನೆಯಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ.
ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಿ ಪ್ರಸಕ್ತ ವರ್ಷದಲ್ಲಿ ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ತಿಳಿಸಿದ್ದಾರೆ