ವಿಟ್ಲ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಸೀದಿ ಆವರಣದಲ್ಲೇ ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದ ಟ್ರಸ್ಟ್ ಸದಸ್ಯ ಗಫೂರ್ ವಿಟ್ಲ ಎಂಬವರು ನೀಡಿದ ದೂರಿನಂತೆ ಅಧ್ಯಕ್ಷನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಫೂರ್ ರವರು ಸಂಜೆ ಮೇಗಿನಪೇಟೆ ಮಸೀದಿ ಬಳಿ ನಿಂತಿದ್ದಾಗ ಮಸೀದಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಮತ್ತು ಮಹಮ್ಮದ್ ಹಂಜಾ ಎಚ್ ರವರು ಹಣಕಾಸಿನ ವಿಚಾರದಲ್ಲಿ ಪರಸ್ಪರ ಚರ್ಚೆ ಮಾಡುತ್ತಿರುವಾಗ ಗಫೂರ್ ರವರು ಉಪವಾಸ ಸಮಯದಲ್ಲಿ ಯಾಕೆ ಚರ್ಚೆ ಮಾಡುತ್ತೀರಿ ಅಗತ್ಯ ಇದ್ದರೆ ಮಸೀದಿಗೆ ನೋಟೀಸ್ ಕೊಡಿ ಎಂದು ಹೇಳಿದಾಗ ಮಸೀದಿ ಅಧ್ಯಕ್ಷರು ಅದನ್ನು ಕೇಳಲು ನೀನು ಯಾರು ಎಂದು ಹೇಳಿ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಗಫೂರ್ ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.