ಪುತ್ತೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರೂ ಮತ್ತು ಎಐಸಿಸಿಯ ಸದಸ್ಯರಾದ ಯಸ್. ಪ್ಯಾರಿ ಜಾನ್ ರವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಜೋಕಿಂ ಡಿಸೋಜರವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜೋಕೀಂ ಡಿಸೋಜ ರವರ ಪರಿಚಯ:
ಬೆಳ್ತಂಗಡಿ ಯಲ್ಲಿ ಜನಿಸಿದ ಜೋಕೀಂ ಡಿಸೋಜ ರವರು ಉದ್ಯೋಗ ನಿಮಿತ್ತ ಸುಮಾರು 35 ವರ್ಷಗಳ ಹಿಂದೆ ಪುತ್ತೂರಿಗೆ ಬಂದು ಪ್ರತಿಷ್ಠಿತ ಸೋಜಾ ಫ್ಯಾಕ್ಟರಿ ಗೆ ಸೇರಿ ಪುತ್ತೂರಿನ ಬನ್ನೂರಿನಲ್ಲಿ ನೆಲೆಸಿದರು.
ಇವರು 1978 ರಲ್ಲಿ ಭಾರತದ ಮಾಜಿ ಪ್ರಧಾನಿಗಳಾದ ಶ್ರೀಮತಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ತೊಡಗಿಸಿಕೊಂಡರು.ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೇ ಧಾರ್ಮಿಕ, ಸಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಸೈಂಟ್ ಅಂತೋಣಿ ಚರ್ಚ್ ಬನ್ನೂರಿನ ಪಾಲನಾ ಸಮಿತಿಯ ಸದಸ್ಯರಾಗಿ,ಪುತ್ತೂರು ಕೋಟಿ ಚೆನ್ನಯ ಜೋಡು ಕೆರೆ ಕಂಬಳದ ಸದಸ್ಯರಾಗಿ, ಸ್ನೇಹ ಸಂಗಮ ಯುವಕ ಮಂಡಲ ಕೇಪುಳು ಇದರ ಅಧ್ಯಕ್ಷರಾಗಿ,ಪುತ್ತೂರು ಸ್ನೇಹ ಸಂಗಮ ಆಟೋ ರಿಕ್ಷಾ ಯುನಿಯನ್ ನ ಗೌರವ ಸಲಹೆಗಾರರಾಗಿ, ಕೆಮ್ಮಾಯಿ ಪ್ರಾಥಮಿಕ ಶಾಲೆಯ ಎಸ್.ಡಿಎಂಸಿ ಅಧ್ಯಕ್ಷರಾಗಿ, ಪುತ್ತೂರಿನ ಪ್ರತಿಷ್ಠಿತ ಬೋರ್ಡ್ ಹೈಸ್ಕೂಲ್ ನ ಎಸ್.ಡಿಎಂಸಿ ಕಾರ್ಯಾಧ್ಯಕ್ಷರಾಗಿ, ಪುತ್ತೂರು ಜಯ ಕರ್ನಾಟಕ ಸಂಘಟನೆಯ ಸಂಘಟನಾ ಕಾರ್ಯದರ್ಶಿಯಾಗಿ ,ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಚುನಾವಣಾ ಸಮಿತಿಯ ಸದಸ್ಯರಾಗಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ, ಪುತ್ತೂರು ಇಂಟಕ್ ನ ಪ್ರಧಾನ ಕಾರ್ಯದರ್ಶಿ ಯಾಗಿ, ಹಾಗೂ ಹತ್ತು ಹಲವು ಸಂಘಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಡವರ,ಅಸಹಾಯಕರ ಧ್ವನಿ ಯಾಗಿರುವ ಇವರು ಪ್ರಸ್ತುತ ಪುತ್ತೂರು ಸೇವಾದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.