ಪುತ್ತೂರು: ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡ ಪ್ರಶಾಂತ್ ಬಿ ಯವರು ಆ. 3 ರಂದು ಪುತ್ತೂರಿನ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ,ಮಂಗಳೂರು ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ,ನಗರ ಅಧ್ಯಕ್ಷ ಪುಷ್ಪರಾಜ್ ದರ್ಬೆ,ನಗರ ಉಪಾಧ್ಯಕ್ಷ ಗೀತೇಶ್ ಅಜ್ಜಿಕಲ್ಲು,ನಗರ ಕಾರ್ಯದರ್ಶಿ ಮನೋಜ್ ಪುತ್ತೂರು ,ತಾಲೂಕು ಭೂ ಸುರಕ್ಷಾ ಪ್ರಮುಖ್ ಕೃಷ್ಣಪ್ರಸಾದ್ ಶೆಟ್ಟಿ,ತಾಲೂಕು ಹಿಂದು ಯುವವಾಹಿನಿ ಸಹ ಪ್ರಮುಖ್ ಮನೀಶ್ ಬನ್ನೂರು ಮತ್ತಿತರು ಉಪಸ್ಥಿತರಿದ್ದರು.