ಪುತ್ತೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಪುತ್ತೂರು ತಾಲೂಕು ಮಟ್ಟದ ಜ್ಞಾನಶರಧಿ/ ಜ್ಞಾನವಾರಿಧಿ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ವಿವಿಧ ಸ್ಪರ್ಧೆಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಸಹಯೋಗದಲ್ಲಿ ನಡೆಯಿತು.
ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾನ್ವಿ. ಎಸ್ ( ಸಂತೋಷ್ ಕುಮಾರ್ ಮತ್ತು ಸೌಮ್ಯಶ್ರೀ ಪಿ ಡಿ) ಭಾಷಣ ಪ್ರಥಮ, ಆಧ್ಯನ್. ಆರ್ ( ಎ ರಂಜಿತ್ ಮತ್ತು ವತ್ಸಲ ) ಚಿತ್ರಕಲೆ ಪ್ರಥಮ, ಅನನ್ಯ ಎನ್ ( ನವೀನ್ ಚಂದ್ರ ಗೌಡ ಹಾಗೂ ಸವಿತಾ ಎನ್) ಪ್ರಬಂಧ ದ್ವಿತೀಯ, ನಾಗಭೂಷಣ ಕಿಣಿ ( ನಾಗರಾಜ್ ಕಿಣಿ ಹಾಗೂ ನಮ್ರತಾ ಕಿಣಿ) ಶ್ಲೋಕ ಕಂಠಪಾಠ ದ್ವಿತೀಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಅಮೋಘ ಕೃಷ್ಣ. ಕೆ ( ಬಾಲಕೃಷ್ಣ ಭಟ್ ಹಾಗೂ ಸುಮಿತ್ರ ಕೆ)ಶ್ಲೋಕ ಕಂಠಪಾಠ ಪ್ರಥಮ ಹಾಗೂ ನಿಲಿಷ್ಕ. ಕೆ ( ದಿನೇಶ್ ನಾಯ್ಕ ಕೆ ಜಿ ಹಾಗೂ ಸ್ಮಿತಾ ಶ್ರೀ ಬಿ) ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ.