ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಸಾಗರ್, ಉಪಾಧ್ಯಕ್ಷರಾಗಿ ಹಮೀದ್ ಸಾಲ್ಮರ ಹಾಗೂ ಕಾರ್ಯದರ್ಶಿಯಾಗಿ ಶಾಕಿರ್ ಅಳಕೆಮಜಲು ಆಯ್ಕೆಯಾಗಿದ್ದಾರೆ. ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್ನಲ್ಲಿ ನಡೆದ ಸಭೆಯಲ್ಲಿ 2021-22ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೋಶಾಧಿಕಾರಿಯಾಗಿ ಅಶ್ರಫ್ ಬಾವು, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಮತ್ತು ಯಹ್ಯಾ ಕೂರ್ನಡ್ಕ ಅವರು ಆಯ್ಕೆಗೊಂಡಿದ್ದಾರೆ. ಸಮಿತಿ ಸದಸ್ಯರಾಗಿ ಮಹಮ್ಮದ್ ಪಿ.ಬಿ.ಕೆ, ಅನ್ವರ್ ಪೆರುವಾಯಿ, ವಿಶ್ವನಾಥ್ ಪುಣ್ಣತ್ತಾರು, ರಶೀದ್ ಮಠ ಉಪ್ಪಿನಂಗಡಿ, ಸಿದ್ದೀಕ್ ಕೆ.ಎ, ರಹೀಂ, ಶಾಫಿ ಪುತ್ತೂರು ಆಯ್ಕೆಯಾಗಿದ್ದಾರೆ.