ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಲೀಲಾವತಿ ಪಡ್ಪು ಎಂಬವರ ಹಳೆ ಮನೆಯೂ ಮಳೆಗೆ ಬಿದ್ದಿದ್ದು, ಪಂಚಾಯತ್ ನಿವೇಶನದಿಂದ ಹೊಸ ಮನೆ ನಿರ್ಮಾಣವಾಗಿದ್ದು, ಹೊಸ ಮನೆಗೆ ವಿದ್ಯುತ್ ಸಂಪರ್ಕವಿಲ್ಲದೇ ಸಂಕಷ್ಟದಲ್ಲಿದ್ದು, ಸುಮಾರು ಬಾರಿ ಪಂಚಾಯತ್ ಮನವಿ ಸಲ್ಲಿಸಿದರು ಸ್ಪಂದನೆ ಸಿಗದೇ ಇದ್ದ ನಂತರ ಈ ಬಗ್ಗೆ ಮನಗಂಡ ಬ್ಲಾಕ್ ಕಾಂಗ್ರೆಸ್ ಎಸ್.ಸಿ. ಘಟಕವೂ ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ ಆ ಭಾಗದಲ್ಲಿ ಒಂದೇ ತಿಂಗಳಿಗೆ ಎರಡು ಕಂಬಗಳನ್ನು ಹಾಕಿ ಸಹಕರಿಸಿದರು. ಕಾಂಗ್ರೆಸ್ ಎಸ್.ಸಿ. ಘಟಕದ ಕೇಶವ ಪಡೀಲ್ ರವರ ಮುತುವರ್ಜಿ ಮೇರೆಗೆ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಈಗ ಬೆಳಕಿನಾಸರೆ ಸಿಕ್ಕಿದಂತಾಗಿದೆ.
ವಿದ್ಯುತ್ ಕಂಬ ಅಳವಡಿಸುವ ಸಂದರ್ಭದಲ್ಲಿ ಕೇಶವ ಪಡೀಲ್, ನವೀನ್ ಕೇಪು, ಕಿಟ್ಟ ಕಲ್ಲಂಗಳ, ಶರತ್ ಪಡೀಲ್, ಸತೀಶ್ ಪಡೀಲ್, ರಮೇಶ್ ಕೇಪುಳ, ಅಶೋಕ ಪಡೀಲ್, ಭವಿತ್, ಹರೀಶ್ ಬಲ್ನಾಡು ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.