ಪುತ್ತೂರು: ನಗರ ಮಂಡಲದ ಕೆಮ್ಮಾಯಿ 139 ಬೂತಿನ ಅಧ್ಯಕ್ಷರಾದ ಅಶೋಕ್ ಬೋವುದ ಕಾಡು ಇವರ ಮನೆಯಲ್ಲಿ ನಾಮಫಲಕ ಅಳವಡಿಕೆ ಕಾರ್ಯಕ್ರಮ ಅ.31 ರಂದು ನಡೆಯಿತು.
ಕಾರ್ಯಕ್ರಮದ ಮೊದಲಿಗೆ ಮೆರವಣಿಗೆಯು ಕೆಮ್ಮಾಯಿ ಯಿಂದ ಬೂತ್ ಅಧ್ಯಕ್ಷರ ಮನೆಗೆ ಸಾಗಿತು. ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು,ನಗರ ಮಂಡಲದ ಪದಾಧಿಕಾರಿಗಳು, ನಗರಸಭಾ ಸದಸ್ಯರು, ಕಾರ್ಯಕರ್ತರು ಹಾಗೂ ಸ್ಥಳೀಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶಾಸಕರು ಸಂಜೀವ ಮಠಂದೂರು ರವರು ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು, ವೇದಿಕೆಯಲ್ಲಿ ಪುತ್ತೂರು ನಗರ ಮಂಡಲದ ಅಧ್ಯಕ್ಷರಾದ ಜಗನ್ನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೂತ್ ಅಧ್ಯಕ್ಷ ಅಶೋಕ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ 139 ಬೂತಿನ ಹಿರಿಯ ಕಾರ್ಯಕರ್ತರಾದ ತಿಮ್ಮಪ್ಪ ಗೌಡ ಕೆಮ್ಮಾಯಿ, ಉದಯ ಕುಮಾರ್ ಆಚಾರ್ಯ ಕೃಷ್ಣ ನಗರ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ ಶೆಣೈ ರವರಿಗೆ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಕೃಷ್ಣ ಶೆಟ್ಟಿ, ಪುತ್ತೂರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತೋಡಿ ಜಯಶ್ರೀ ಶೆಟ್ಟಿ ನಗರಸಭಾ ಸದಸ್ಯರಾದ ಲೀಲಾವತಿ ಕೃಷ್ಣ ನಗರ, ಸುಂದರ ಪೂಜಾರಿ ಬಡಾವು,ಶಕ್ತಿ ಕೇಂದ್ರದ ಪ್ರಮುಖರಾದ ಅಪರ್ಣ ಪಡೀಲು, ಇಂದು ಶೇಖರ ಹಾಗೂ ಇನ್ನಿತರಪುತ್ತೂರು ನಗರಸಭಾ ಸದಸ್ಯರು, ಭಾಜಪದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೂತಿನ ಕಾರ್ಯಕರ್ತರಾದ ವೇಣುಗೋಪಾಲ್, ಕಾರ್ಯದರ್ಶಿ ಪ್ರಶಾಂತ್ ಕೃಷ್ಣನಗರ, ರವಿ ಆಚಾರ್ಯ, ಮನದೀಪ್ ಕೆಮ್ಮಾಯಿ, ದಿನೇಶ ಆಚಾರ್ಯ ಜಯರಾಮ್ ಪೂಜಾರಿ ಬಡಾವು, ಪುಷ್ಪರಾಜ್ ಕೃಷ್ಣನಗರ, ಪ್ರಕಾಶ್ ಬೊವುದಕಾಡು ಇವರು ಹೂಗುಚ್ಛ ನೀಡಿ ಅತಿಥಿಗಳನ್ನು ಸ್ವಾಗತಿಸಿದರು.
ಮಹಿಳಾ ಮೋರ್ಚಾದ ಸದಸ್ಯೆ ಕುಸುಮ ಚಂದಪ್ಪ, ಕಾರ್ಯಕರ್ತರಾದ ಉದಯ ಆಚಾರ್ಯ, ನಾರಾಯಣ, ಪುಷ್ಪರಾಜ್ ಕೃಷ್ಣನಗರ,ಗಣೇಶ್ ಆಚಾರ್ಯ ಸ್ಥಳೀಯರಾದ ಸೋಮಪ್ಪ ಬಡಾವು ವಿಶ್ವನಾಥ, ಯೋಗೀಶ್ ಸಂತೋಷ್ ಶೆಟ್ಟಿ, ಹರ್ಷಿತ್, ಜನಾರ್ದನ ಪೆರಲ್ತಡಿ, ಕಾರ್ತಿಕ್ ಅಂದ್ರಟ್ಟ, ಉಮೇಶ್ ಮರಕ್ಕೂರುಮತ್ತು ಸ್ಥಳೀಯರು ಹಾಜರಿದ್ದರು. ಕಾರ್ಯಕ್ರಮವನ್ನು ಉದಯಕುಮಾರ್ ಆಚಾರ್ಯ ಸ್ವಾಗತಿಸಿ, ಮಾಲಿನಿ ದಿನೇಶ ಆಚಾರ್ಯ ನಿರೂಪಿಸಿ, ಧನ್ಯವಾದ ಗೈದರು.
































