ಉಪ್ಪಿನಂಗಡಿ: ಯಾರೋ ದುಷ್ಕರ್ಮಿಗಳು ದಾರಿ ಮಧ್ಯೆ ಗ್ರೇನೈಡ್ ಅನ್ನು ಬಿಸಾಡಿ ಹೋಗಿದ್ದು, ಈ ಬಗ್ಗೆ ಅದೇ ದಾರಿಯಲ್ಲಿ ಹೋಗುವ ವ್ಯಕ್ತಿಯೊಬ್ಬರು ಗಮನಿಸಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಬೆಳ್ತಂಗಡಿ ತಾಲೂಕು ಇಳಂತಿಲ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಇಳಂತಿಲದ ಜಯಕುಮಾರ್ ಎಂಬವರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅದೇ ದಾರಿಯಲ್ಲಿ ಯಾರೋ ದುಷ್ಕರ್ಮಿಗಳು ಗ್ರೇನೈಡ್ ಅನ್ನು ಬಿಸಾಡಿ ಹೋಗಿದ್ದು, ಜಯಕುಮಾರ್ ರವರು ನಿವೃತ್ತ ಭೂ ಸೇನಾ ರೆಜಿಮೆಂಟಿನಲ್ಲಿ ಎಸ್. ಸಿ ಒ ಆಗಿದ್ದರಿಂದ ಅವರು ಗ್ರೇನೈಡ್ ಅನ್ನು ಗುರುತಿಸಿದ್ದು, ಅದನ್ನು ಅಲ್ಲಿಯೇ ಬಿಟ್ಟರೇ ಸಾರ್ವಜನಿಕರಿಗೆ ತೊಂದರೆಯಾಗಬಹುದೆಂಬ ನಿಟ್ಟಿನಲ್ಲಿ ಮನೆಯ ಅಂಗಳದಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ. 129/2021 ಕಲಂ: 25,1B, 7 ARMS Act ನಡಿಯಲ್ಲಿ ಪ್ರಕರಣ ದಾಖಲಾಗಿದೆ.