ಕಡಬ: ತಾಲೂಕಿನ ಕೊಂಬಾರಿನಲ್ಲಿ ಬಾವಿಗೆ ಬಿದ್ದ ಚಿರತೆ ನೋಡಲು ತೆರಳಿದ್ದ ಯುವಕರಿಬ್ಬರು ತಮ್ಮ ಮೊಬೈಲ್ ನಲ್ಲಿ ಹಿಂದೂ ಯುವತಿಯರ ಫೋಟೋ ತೆಗೆದು ಸ್ಥಳೀಯರಿಂದ ಒಡೆ ತಿಂದ ಘಟನೆ ನ.7 ರಂದು ಸಂಜೆ ನಡೆದಿದೆ.
ಚಿರತೆ ನೋಡಲು ವಿವಿಧ ಭಾಗಗಳಿಂದ ಜನರು ತಂಡೋಪ ತಂಡವಾಗಿ ಆಗಮಿಸಿದ್ದು, ಈ ಸಂದರ್ಭದಲ್ಲಿ ಆಗಮಿಸಿದ್ದ ಸುಂಕದಕಟ್ಟೆ ಸಮೀಪದ ಅನ್ನಡ್ಕದ ಇಬ್ಬರು ಯುವಕರು ಬಂದಿದ್ದು, ಸ್ಥಳದಲ್ಲಿದ್ದ ಯುವತಿಯರ ಫೋಟೋ ತೆಗೆದಿದ್ದರು ಎನ್ನಲಾಗಿದೆ.
ಈ ವಿಚಾರ ತಿಳಿದು ಸ್ಥಳದಲ್ಲಿ ಉದ್ಧಿಗ್ನ ಸ್ಥಿತಿ ಉಂಟಾಗಿದ್ದು, ನೆರೆದಿದ್ದ ಸ್ಥಳೀಯರು ಮೂವರಿಗೆ ಗೂಸಾ ನೀಡಿದ್ದಾರೆ ಎನ್ನಲಾಗಿದೆ. ಫೋಟೋ ತೆಗೆದಿರುವುದನ್ನು ಒಪ್ಪಿಕೊಂಡು ತಪ್ಪಿಗೆ ಯುವತಿಯರ ಬಳಿ ಕ್ಷಮೆ ಕೇಳಿದ ಈ ಹಿನ್ನಲೆ ಪೊಲೀಸರಿಗೆ ದೂರು ನೀಡಲಾಗಿಲ್ಲ ಎಂದು ತಿಳಿದು ಬಂದಿದೆ.