ಪುತ್ತೂರು: ಮಾತನಾಡಿದಾಗ ಹೆಂಡತಿ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡ ಹೆಂಡತಿ ಮೇಲೆ ಚಾಕುವಿನಿಂದ ಹಲ್ಲೆಗೈದ ಘಟನೆ ಬನ್ನೂರು ಗ್ರಾಮದ ಕಜೆ ಸೇಡಿಯಾಪುವಿನಲ್ಲಿ ನಡೆದಿದೆ.
ನ.13 ರಂದು ಪತ್ನಿ ಮನೆಯಲ್ಲಿ ಕೆಲಸ ಮಾಡುತಿದ್ದ ವೇಳೆ ಪತಿ ಅವರ ಬಳಿಗೆ ಬಂದು ‘ನಾನು ಸತ್ತರೆ ನೀನು ಏನೂ ಮಾಡುವೆ..?’ ಎಂದು ಕೇಳಿದ್ದು, ಇದಕ್ಕೆ ಪತ್ನಿ ಯಾವುದೇ ಸ್ಪಂದನೆ ನೀಡದಿದ್ದಾಗ ಕೋಪಗೊಂಡ ಪತಿ ಚಾಕುವಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಪತ್ನಿ ಬೊಬ್ಬೆ ಹಾಕಿದಾಗ ಮನೆಯವರೆಲ್ಲ ಬಂದು ತಡೆದಿದ್ದು, ಗಾಯಗೊಂಡ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದು, ಅದೇ ಚಿಂತೆಯಲ್ಲಿ ಪತ್ನಿ ಜೊತೆ ಮಾತನಾಡಿದಾಗ ಸರಿಯಾಗಿ ಮಾತನಾಡದೇ ಇದ್ದ ಕಾರಣಕ್ಕೆ ಕೋಪಗೊಂಡು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.