ಮಂಗಳೂರು: ಕಿರಿಯ ಪೊಲೀಸ್ ಸಿಬ್ಬಂದಿ ಕಮಲೇಶ್ ತೊಂಡಿಹಾಳ ಅನಾರೋಗ್ಯದಿಂದಾಗಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನರಾಗಿದ್ದಾರೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಟ್ವೀಟ್ ಮಾಡಿದ್ದು, “ಪೊಲೀಸ್ ಇಲಾಖೆಯ ಕಿರಿಯ ಸದಸ್ಯ ಎಪಿಸಿ 2817 ಕಮಲೇಶ್ ತೊಂಡಿಹಾಳ ಅನಾರೋಗ್ಯದಿಂದಾಗಿ ನಾರಾಯಣ ಹೃದಯಾಲಯದಲ್ಲಿ ನಿಧನ ಹೊಂದಿದ್ದಾರೆ. ಇವರು ಮಂಗಳೂರು ನಗರ ಸಿಎಆರ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಅವರ ಆತ್ಮಕ್ಕೆ ಶಾಂತಿ ಸಿಗಲಿ”. “ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಕುಟುಂಬಕ್ಕೆ ಕರುಣಿಸಲಿ” ಎಂದಿದ್ದಾರೆ.