ಪುತ್ತೂರು: ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ ‘ಅ ಸಿಂಧು’ ಆದೇಶದ ಬಗ್ಗೆ ಪರಿಶೀಲನೆ ನಡೆಸಿ ಸರಕಾರದಿಂದ ಪಡೆದುಕೊಂಡ ಗೌರವಧನವನ್ನು ಬಡ್ಡಿ ಸಮೇತ ವಸೂಲು ಮಾಡಲು ಕ್ರಮ ಕೈಗೊಳ್ಳುವಂತೆ ಜಗನ್ನಾಥ ಶೆಟ್ಟಿ ಮತ್ತು ಜಯಪ್ರಕಾಶ್ ಬದಿನಾರು ರವರು ತಾಲೂಕು ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ನೀಡಿದರು.
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಒಕ್ಕೂಟ ಮುಖ್ಯ ಪುಸ್ತಕ ಬರಹಗಾರರನ್ನು ‘ಅಸಿಂಧು’ ಎಂದು ಜ.25 ರಂದು ಆದೇಶ ಮಾಡಿದ್ದು, ಆದರೆ ಮರು ನೇಮಕಾತಿ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿರುವುದಿಲ್ಲ. ಸದ್ರಿ ಅಮಾನತುಗೊಂಡಿರುವ ಅಭ್ಯರ್ಥಿ ತಮ್ಮ ಆದೇಶವನ್ನು ದಿಕ್ಕರಿಸಿ, ಪತ್ರಿಕಾ ಪ್ರಕಟಣೆ ನೀಡುತ್ತಾ ಸಮಾಜಕ್ಕೆ ಆಡಳಿತದ ಬಗ್ಗೆ ತಪ್ಪು ಸಂದೇಶ ನೀಡುತ್ತಿದ್ದು, ಅವರು ಸರಕಾರಕ್ಕೆ ಸುಳ್ಳು ದಾಖಲೆ ನೀಡಿ ವಂಚಿಸಿದ ಆರೋಪವನ್ನು ಮುಚ್ಚಿ ಹಾಕಲು ಈ ಸಂಘವನ್ನು ಬಳಸಿಕೊಂಡು ಮತ್ತೊಮ್ಮೆ ವಂಚಿಸಲು ಹೊರಟಿದ್ದಾರೆ.
ಅವರ ಅಧ್ಯಕ್ಷತೆಯ ಅವಧಿಯಲ್ಲಿ ನಡೆದ ಕಾಂಪೋಸ್ಟ್ ಪೈಪು ಹಗರಣದ ವಿವಾದ ಇನ್ನು ಇತ್ಯರ್ಥವಾಗಲಿಲ್ಲ. ಆದುದರಿಂದ ಇದನ್ನು ಪರಿಶೀಲಿಸಿ ಅವರ ಮುಖ್ಯ ಪುಸ್ತಕ ಬರಹಗಾರ ಅವಧಿಯಲ್ಲಿ ಸರಕಾರದಿಂದ ಪಡೆದುಕೊಂಡ ಗೌರವಧನವನ್ನು ಬಡ್ಡಿ ಸಮೇತ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
























