ಪುತ್ತೂರು: ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಓದುತ್ತಿರುವ ವಿದ್ಯಾರ್ಥಿಯೋರ್ವ ಅಂಬಿಕಾ ವಸತಿ ನಿಲಯದಿಂದ ಕಾಲೇಜಿಗೆಂದು ತೆರಳಿ ಹೋಗಿದ್ದು, ಮರಳಿ ಬಾರದೇ ನಾಪತ್ತೆಯಾಗಿದ್ದಾನೆ ಎಂದು ವಸತಿ ನಿಲಯದ ಮೇಲ್ವಿಚಾರಕರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ನಾಪತ್ತೆಯಾದ ಬಾಲಕ ನನ್ನು ಚಿತ್ರದುರ್ಗದ ಜಗದೀಶ್ ಎಂಬವರ ಪುತ್ರ ಆದಿತ್ಯ(19) ಎನ್ನಲಾಗಿದೆ.
ಆದಿತ್ಯ ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಓದುತ್ತಿದ್ದು, ಅಂಬಿಕಾ ವಸತಿ ನಿಲಯದಲ್ಲಿ ವಾಸವಾಗಿದ್ದ.
ಫೆ.22 ರಂದು ಆದಿತ್ಯ ಕಾಲೇಜಿಗೆಂದು ತೆರಳಿದ್ದು, ಸಂಜೆ ವೇಳೆ ವಾಪಾಸ್ಸು ಬಾರದ ಹಿನ್ನೆಲೆ ಕಾಲೇಜಿನಲ್ಲಿ ವಿಚಾರಿಸಿದಾಗ ಅಂದು ಆತ ಕಾಲೇಜಿಗೆ ತೆರಳಲಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಮನೆಯವರ ಬಳಿ ವಿಚಾರಿಸಿದಾಗ ಆತ ಮನೆಗೂ ತೆರಳದೇ ಇದ್ದು, ವಸತಿ ನಿಲಯದ ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸಿದಾಗ ಫೆ.22 ರಂದು ಆದಿತ್ಯ ಶಾಲಾ ಸಮವಸ್ತ್ರ ಧರಿಸಿ ಕಾಲೇಜು ಬ್ಯಾಗ್ ಸಮೇತ ಹೋಗಿದ್ದು ಕಂಡು ಬಂದಿದ್ದು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದಾಗ ಆತ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅಕ್ರ.09/2022 ರಂತೆ ನಾಪತ್ತೆ ಪ್ರಕರಣ ದಾಖಲಾಗಿದೆ.
ಕಾಣೆಯಾದ ಹುಡುಗನ ಚಹರೆ ಗುರುತು:-
- ಆದಿತ್ಯ .ಜೆ. ಪ್ರಾಯ: 19 ವರ್ಷ,
- ಚಹರೆ: ಎತ್ತರ: 5.6 ಅಡಿ
- ಮೈಬಣ್ಣ: ಗೋಧಿ ಮೈಬಣ್ಣ
- ವಿದ್ಯಾರ್ಹತೆ: ದ್ವಿತೀಯ ಪಿಯುಸಿ ವ್ಯಾಸಂಗ
- ತಿಳಿದಿರುವ ಭಾಷೆ : ಕನ್ನಡ , ಇಂಗ್ಲೀಷ್, ಹಿಂದಿ
- ಧರಿಸಿರುವ ಬಟ್ಟೆ: ತಿಳಿಕಂದು ಬಣ್ಣದ ಶರ್ಟ್ , ಕಂದು ಬಣ್ಣದ ಪ್ಯಾಂಟ್