Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಸುಹಾಸ್ ಹತ್ಯೆ : ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದಿದ್ದ ಮಾಜಿ ಕಾರ್ಪೊರೇಟರ್ ವಿರುದ್ಧ FIR..!!!

    ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

    ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

    ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

    ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ವಿದ್ಯಾರ್ಥಿಯಿಂದ ದೈಹಿಕ ಸಂಪರ್ಕ : ವಿದ್ಯಾರ್ಥಿನಿ ಗರ್ಭವತಿ…!!! ಠಾಣೆಯಲ್ಲಿ ರಾಜಿ ಮಾತುಕತೆ..???

    ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

    ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಪ್ರವೀಣ್ ಕುಮಾರ್ ಮುಂಬಡ್ತಿಗೊಂಡು ವರ್ಗಾವಣೆ..!!

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಪ್ರವೀಣ್ ಕುಮಾರ್ ಮುಂಬಡ್ತಿಗೊಂಡು ವರ್ಗಾವಣೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಸುಹಾಸ್ ಹತ್ಯೆ : ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದಿದ್ದ ಮಾಜಿ ಕಾರ್ಪೊರೇಟರ್ ವಿರುದ್ಧ FIR..!!!

    ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

    ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

    ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

    ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ವಿದ್ಯಾರ್ಥಿಯಿಂದ ದೈಹಿಕ ಸಂಪರ್ಕ : ವಿದ್ಯಾರ್ಥಿನಿ ಗರ್ಭವತಿ…!!! ಠಾಣೆಯಲ್ಲಿ ರಾಜಿ ಮಾತುಕತೆ..???

    ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

    ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಪ್ರವೀಣ್ ಕುಮಾರ್ ಮುಂಬಡ್ತಿಗೊಂಡು ವರ್ಗಾವಣೆ..!!

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಪ್ರವೀಣ್ ಕುಮಾರ್ ಮುಂಬಡ್ತಿಗೊಂಡು ವರ್ಗಾವಣೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ರಾಷ್ಟ್ರೀಯ

ಆರು ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಮಗ: ಕೊನೆಗೂ ಕೇಳಿಸಿತು ಕರುಳಿನ ಕೂಗು..!!

March 12, 2022
in ರಾಷ್ಟ್ರೀಯ
0
ಆರು ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಮಗ: ಕೊನೆಗೂ ಕೇಳಿಸಿತು ಕರುಳಿನ ಕೂಗು..!!
Share on WhatsAppShare on FacebookShare on Twitter
Advertisement
Advertisement

ಕರುಳಿನ ಕೂಗು, ಕರುಳಿನ ಸಂಕಟ, ಕರುಳಿನ ಕಣ್ಣೀರು.. ಅನುಭವಿಸಿ ನೋವುಂಡವರಿಗಷ್ಟೇ ಗೊತ್ತು. ಈ ಸಂಕಷ್ಟ ನಿವಾರಣೆಗೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಹುಡುಕಿದರೂ ಗುಳಿಗೆ ಸಿಗಲ್ಲ. ಸಂಕಟ ಬಂದಾಗ ವೆಂಕಟರಮಣ ಎಂದು ದೇವರ ಮೊರೆ ಹೋದರೂ ನೆಮ್ಮದಿ ಇರಲ್ಲ. ಕೋಟಿ ಕೋಟಿ ಹಣದ ಸುಪತ್ತಿಗೆ ಸಿಕ್ಕರೂ ಮನಸ್ಸಿನಾಳದ ನೋವು ನಿವಾರಣೆಯಾಗಲ್ಲ. ಜನ್ಮ ನೀಡಿದ ಕೂಸು ‘ಮಾತೃ ಹೃದಯ’ದ ಮುಂದೆ ಇದ್ದರಷ್ಟೇ ನೆಮ್ಮದಿ, ಸಂತೋಷ, ಅದಕ್ಕೊಂದು ಬೆಲೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement

ಹೀಗಿರುವಾಗ ಪ್ರಪಂಚಕ್ಕೆ ಕಾಲಿಟ್ಟ ಕರುಳ ಬಳ್ಳಿಯೊಂದು ಅಮ್ಮನ ಮಡಿಲಿನಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟರೆ, ಏನಾಗಬೇಡ ಹೇಳಿ.? ಎದೆ ಒಡೆದು ಹೃದಯ ಬಾಯಿಗೆ ಬಂದ ತಳಮಳ.. ನೆನಪು ಆದಾಗೆಲ್ಲ ಸಂಕಟ.. ಕೂತಲ್ಲಿ, ನಿಂತಲ್ಲ, ಹೋದಲೆಲ್ಲಾ ಅದೇ ನೋವು, ಅದೇ ಕಣ್ಣೀರು.. ಹೀಗೆ ಬರೋಬ್ಬರಿ 6 ವರ್ಷಗಳಿಂದ ಕಂದಮ್ಮನಿಗಾಗಿ ರೋಧಿಸುತ್ತಿದ್ದ ತಾಯಿ ಒಬ್ಬರಿಗೆ ಖುಷಿ ಸುದ್ದಿ ಸಿಕ್ಕಿದೆ. ಮನೆಯಲ್ಲಿ ಹರ್ಷೋದ್ಘಾರ ಮೊಳಗಿದೆ.

ಹೌದು.. ಇದೊಂಥರಾ ‘ಭಜರಂಗಿ ಭಾಯಿಜಾನ್’ ಸಿನಿಮಾದ ಕಥೆ ಥರಾನೇ. 2016ರಲ್ಲಿ ಮಾತು ಬಾರದ ಭರತ್ ಎಂಬ ಹುಡುಗ ಅಮ್ಮನ ಜೊತೆ ಯಲಹಂಕ ಮಾರುಕಟ್ಟೆಗೆ ತರಕಾರಿ ಮಾರಲು ಬಂದಿದ್ದ. ಸಿಂಗನಾಯಕನಹಳ್ಳಿಯ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಇದ್ದಕ್ಕಿದ್ದಂತೆ ಜನರ ಸಂತೆಯಲ್ಲಿ ಅಮ್ಮನ ಮಡಿಲಿನಿಂದ ಕಾಣೆಯಾಗಿಬಿಟ್ಟಿದ್ದ. ಮಗನನ್ನ ಕಳೆದುಕೊಂಡ ತಾಯಿ ಪಾರ್ವತಿ, ಎಲ್ಲಾ ಕಡೆ ಹುಡುಕಾಟ ನಡೆಸ್ತಾರೆ. ಇಡೀ ಮಾರುಕಟ್ಟೆ ಹುಡುಕಿದರೂ ಎಲ್ಲಿಯೂ ಮಗನ ಸುಳಿವು ಸಿಗುವುದಿಲ್ಲ. ಗಾಬರಿಗೊಂಡ ತಾಯಿ ಯಲಹಂಕ ಠಾಣೆಗೆ ದೂರು ನೀಡಿದ್ದರು. ಆದರೆ ಕಳೆದುಹೋದ ಮಗನ ಪತ್ತೆ ಆಗಲೇ ಇಲ್ಲ.

Advertisement
Advertisement

ಎಲ್ಲಿಗೆ ಹೋಗಿದ್ದ ಹುಡುಗ..?

ಅಮ್ಮನ ಕಳೆದುಕೊಂಡ ಮಗ ಭರತ್ ಕೂಡ ಹುಡುಕಾಟ ನಡೆಸಿದ. ಅಮ್ಮ ಎಲ್ಲಿದ್ದಾಳೆ..? ಹೇಗೆ ಹೋಗಬೇಕು ಅಂತೆಲ್ಲಾ ತಡಕಾಡಿದ್ದ. ಮಾತು ಬಾರದ ಹಿನ್ನೆಲೆಯಲ್ಲಿ ಮಡಿಲು ಸೇರಲು ಆಗಲಿಲ್ಲ. ದಿಕ್ಕು ತೋಚದಂತಾದ ಭರತ್, ಯಲಹಂಕ ರೈಲ್ವೇ ನಿಲ್ದಾಣಕ್ಕೆ ಬಂದು ಅಲ್ಲಿಂದ ಮಹಾರಷ್ಟ್ರದ ನಾಗಪುರಕ್ಕೆ ಹೋಗಿಬಿಟ್ಟ. ಕಾಣೆಯಾದ ಎರಡು ಮೂರು ದಿನಕ್ಕೆ ಆತ ಅಲ್ಲಿಗೆ ಹೋಗಿದ್ದಲ್ಲ. ಅಮ್ಮನಿಂದ ತಪ್ಪಿಸಿಕೊಂಡು ಬರೋಬ್ಬರಿ 10 ತಿಂಗಳ ಬಳಿಕ ಅಲ್ಲಿಗೆ ಹೋಗಿದ್ದ ಅನ್ನೋ ಮಾಹಿತಿ ಇದೆ. ಕೊನೆಗೊಂದು ದಿನ ನಾಗ್ಪುರ ರೈಲ್ವೇ ನಿಲ್ದಾಣವನ್ನ ಸೇರಿದ್ದ ಭರತನನ್ನ, ಅಲ್ಲಿನ ಅಧಿಕಾರಿಗಳು ಗಮನಿಸುತ್ತಾರೆ. ನಂತರ ಪುನರ್ವಸತಿ ಕೇಂದ್ರಕ್ಕೆ ಆತನನ್ನ ಸೇರಿಸುತ್ತಾರೆ.

ಭರತ್ ಅಮ್ಮನ ಮಡಿಲು ಸೇರಿದ್ದು ಹೇಗೆ..?

ಭರತ್ ಅದಾಗಲೇ ಮಹಾರಾಷ್ಟ್ರಕ್ಕೆ ಹೋಗಿ ಬರೋಬ್ಬರಿ 6 ವರ್ಷಗಳೇ ಕಳೆದುಹೋಗಿತ್ತು. ಪುನರ್ವಸತಿ ಕೇಂದ್ರದಲ್ಲಿರುವ ಅಧಿಕಾರಿಗಳು, ಭರತ್​​ಗೆ ಆಧಾರ್ ಕಾರ್ಡ್ ಮಾಡಿಸಲು ನಿರ್ಧರಿಸಿದ್ದರು. ಅದರಂತೆ, 2022, ಜನವರಿಯಲ್ಲಿ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿ ಆಧಾರ್​ ಕಾರ್ಡ್​​ ಮಾಡಿಸಲು ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನ ಮಾಡಲಾಗಿತ್ತು.

ಆದರೆ ಕೆಲ ದಿನಗಳ ಬಳಿಕ ಭರತ್‌ನ ಹೊಸ ಆಧಾರ್ ಕಾರ್ಡ್ ತಿರಸ್ಕೃತ ಆಗಿರುವ ಬಗ್ಗೆ ಆಧಾರ್ ಸೇವಾ ಕೇಂದ್ರ ಅಧಿಕಾರಿ ಅನಿಲ್ ಮರಾಠೆ ಮಾಹಿತಿ ನೀಡಿದರು. ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಯಲ್ಲಿರುವ ಬಗ್ಗೆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ತಿಳಿಸಿದರು. ವಿಷಯ ಗೊತ್ತಾದ ಕೂಡಲೇ ಭರತ್ ಪೋಷಕರ ವಿಳಾಸ ಪತ್ತೆಗೆ ಪುನರ್ವಸತಿ ಕೇಂದ್ರ ಅಧಿಕಾರಿ ಮಹೇಶ್ ನೇತೃತ್ವದಲ್ಲಿ ಪ್ರಯತ್ನ ನಡೆಯುತ್ತದೆ.

ಬಿ.ಭರತ್ ಕುಮಾರ್ ಹೆಸರಿನಲ್ಲಿದ್ದ ವ್ಯಕ್ತಿಯ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡಕ್ಕೂ ಸಾಮ್ಯತೆ ಇರೋದು ಕಂಡು ಬಂದಿದೆ. ಅಲ್ಲದೇ ಆ ಆಧಾರ್ ಕಾರ್ಡ್‌ನಲ್ಲಿ ಭರತ್‌ನ ತಾಯಿ, ಪಾರ್ವತಮ್ಮ ಅವರ ಮೊಬೈಲ್ ನಂಬರ್ ಇರೋದು ಗೊತ್ತಾಗಿದೆ. ಇದರಿಂದ ಮತ್ತಷ್ಟು ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡುತ್ತಾರೆ.

ಕರುಳಿನ ಕೂಗು ಕರೆಯುತ್ತಲೇ ಇತ್ತು..!

ಕೊನೆಗೆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಯಲಹಂಕ ಪೊಲೀಸರನ್ನು ಸಂಪರ್ಕಸ್ತಾರೆ. ಯಲಹಂಕ ಪೊಲೀಸರು ಕೊನೆಗೂ ಪಾರ್ವತಮ್ಮ ಅವರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ. ಕೂಡಲೇ ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್, ಪಾರ್ವತಮ್ಮ ಅವರನ್ನ ನಾಗ್ಪುರಕ್ಕೆ ಕಳುಹಿಸುತ್ತಾರೆ. ಮಾರ್ಚ್ 7 ರಂದು 19 ವರ್ಷದ ಮಗನನ್ನು ಕಂಡು ಪಾರ್ವತಮ್ಮ ಭಾವುಕರಾಗುತ್ತಾರೆ. ಅದಾದ ಎರಡು ದಿನಗಳ ಬಳಿಕ ಮಗನನ್ನು ಮನೆಗೆ ಕರೆದುಕೊಂಡು ಬರುತ್ತಾರೆ.

ತಾಯಿ ಮಗನ ಬೆಸುಗೆ ತಪ್ಪಿ 6 ವರ್ಷಗಳೇ ಕಳೆದು ಹೋಗಿತ್ತು. ಕಾಣೆಯಾದ ಪುತ್ರನಿಗೆ ಹಂಬಲಿಸಿ ದೇವರಿಗೆ ಮಾಡಿಕೊಂಡ ಹರಕೆಗಳು ಲೆಕ್ಕಕ್ಕೇ ಇಲ್ಲವಂತೆ. ಕೊನೆಗೂ ಸುಪುತ್ರ ಮನೆ ಸೇರಿರುವ ಸಂತೋಷ ಪಾರ್ವತಮ್ಮರಲ್ಲಿ ತುಂಬಿದೆ. ಇಲ್ಲಿ ಭಾಯಿಜಾನ್ ನಂತೆ ಕಾರ್ಯ ನಿರ್ವಹಿಸಿರುವ ಪುನರ್ ವಸತಿ ಕೇಂದ್ರ ಮತ್ತು ಆಧಾರ್ ಕೇಂದ್ರದ ಅಧಿಕಾರಿಗಳಿಗೂ ಸಲಾಂ ಹೇಳಲೇಬೇಕು.

Advertisement
Previous Post

ಪಾಕ್‌ ಯುವತಿಯನ್ನು ಮದುವೆಯಾದ ದಿನವೇ ಬಾಂಬ್‌ ಸ್ಫೋಟದಲ್ಲಿ ಸಾವನ್ನಪ್ಪಿದ ಕೇರಳ ಮೂಲದ ಉಗ್ರ..!!

Next Post

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್‌: ಉಡುಪಿಯ ಮೂವರ ವಿರುದ್ಧ ಪ್ರಕರಣ ದಾಖಲು..!!

OtherNews

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!

March 25, 2025
One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ
ರಾಜಕೀಯ

One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ

December 17, 2024
ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!
ಆವಿಷ್ಕಾರ

ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!

November 28, 2024
ನಾನ್‌ವೆಜ್ ಸೇವನೆ ಬಿಡುವಂತೆ ಒತ್ತಡ; ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ – ಪ್ರಿಯಕರ ಅರೆಸ್ಟ್
Featured

ನಾನ್‌ವೆಜ್ ಸೇವನೆ ಬಿಡುವಂತೆ ಒತ್ತಡ; ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ – ಪ್ರಿಯಕರ ಅರೆಸ್ಟ್

November 28, 2024

Leave a Reply Cancel reply

Your email address will not be published. Required fields are marked *

Recent News

ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಸುಹಾಸ್ ಹತ್ಯೆ : ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದಿದ್ದ ಮಾಜಿ ಕಾರ್ಪೊರೇಟರ್ ವಿರುದ್ಧ FIR..!!!

May 18, 2025
ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

May 18, 2025
ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

May 18, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪುತ್ತೂರು: ವಿದ್ಯಾರ್ಥಿಯಿಂದ ದೈಹಿಕ ಸಂಪರ್ಕ : ವಿದ್ಯಾರ್ಥಿನಿ ಗರ್ಭವತಿ…!!! ಠಾಣೆಯಲ್ಲಿ ರಾಜಿ ಮಾತುಕತೆ..???

May 18, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page