Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಬೀಟ್ ಪೊಲೀಸರ ಮೇಲೆ ಹಲ್ಲೆ : ಪುತ್ತೂರಿನ ಯುವಕ ಸಹಿತ ಇಬ್ಬರು ಆರೋಪಿಗಳ ಬಂಧನ..!!

    ಮಂಗಳೂರು: ಬೀಟ್ ಪೊಲೀಸರ ಮೇಲೆ ಹಲ್ಲೆ : ಪುತ್ತೂರಿನ ಯುವಕ ಸಹಿತ ಇಬ್ಬರು ಆರೋಪಿಗಳ ಬಂಧನ..!!

    ದುಬೈ ಅಪಘಾತದಲ್ಲಿ ಗಾಯಗೊಂಡಿದ್ದ ಮುಲ್ಕಿಯ ಪ್ರತಿಭಾನ್ವಿತ ಯುವತಿ ಶ್ರೀಲತಾ ತಂತ್ರಿ ನಿಧನ..!!

    ದುಬೈ ಅಪಘಾತದಲ್ಲಿ ಗಾಯಗೊಂಡಿದ್ದ ಮುಲ್ಕಿಯ ಪ್ರತಿಭಾನ್ವಿತ ಯುವತಿ ಶ್ರೀಲತಾ ತಂತ್ರಿ ನಿಧನ..!!

    ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು..!!

    ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು..!!

    ಪುಡಾದ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಕೂರ್ನಡ್ಕ ಡಿ.ಕೆ. ಅಬ್ದುಲ್ ರಹಿಮಾನ್ ನಿಧನ..!!

    ಪುಡಾದ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಕೂರ್ನಡ್ಕ ಡಿ.ಕೆ. ಅಬ್ದುಲ್ ರಹಿಮಾನ್ ನಿಧನ..!!

    ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ಅಪಘಾತ ಕೆ.ಎಸ್.ಆರ್.ಟಿ.ಸಿ. ಬಸ್‌ : ಟೆಂಪೋ ಟ್ರಾವೆಲ್ಲರ್ ಡಿಕ್ಕಿ : ಮಹಿಳೆ ಮೃತ್ಯು, ಏಳು ಮಂದಿಗೆ ಗಾಯ…!!!

    ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ಅಪಘಾತ ಕೆ.ಎಸ್.ಆರ್.ಟಿ.ಸಿ. ಬಸ್‌ : ಟೆಂಪೋ ಟ್ರಾವೆಲ್ಲರ್ ಡಿಕ್ಕಿ : ಮಹಿಳೆ ಮೃತ್ಯು, ಏಳು ಮಂದಿಗೆ ಗಾಯ…!!!

    ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಸಿಸಿಬಿ ಬಲೆಗೆ..!!

    ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಸಿಸಿಬಿ ಬಲೆಗೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಬೀಟ್ ಪೊಲೀಸರ ಮೇಲೆ ಹಲ್ಲೆ : ಪುತ್ತೂರಿನ ಯುವಕ ಸಹಿತ ಇಬ್ಬರು ಆರೋಪಿಗಳ ಬಂಧನ..!!

    ಮಂಗಳೂರು: ಬೀಟ್ ಪೊಲೀಸರ ಮೇಲೆ ಹಲ್ಲೆ : ಪುತ್ತೂರಿನ ಯುವಕ ಸಹಿತ ಇಬ್ಬರು ಆರೋಪಿಗಳ ಬಂಧನ..!!

    ದುಬೈ ಅಪಘಾತದಲ್ಲಿ ಗಾಯಗೊಂಡಿದ್ದ ಮುಲ್ಕಿಯ ಪ್ರತಿಭಾನ್ವಿತ ಯುವತಿ ಶ್ರೀಲತಾ ತಂತ್ರಿ ನಿಧನ..!!

    ದುಬೈ ಅಪಘಾತದಲ್ಲಿ ಗಾಯಗೊಂಡಿದ್ದ ಮುಲ್ಕಿಯ ಪ್ರತಿಭಾನ್ವಿತ ಯುವತಿ ಶ್ರೀಲತಾ ತಂತ್ರಿ ನಿಧನ..!!

    ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು..!!

    ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು..!!

    ಪುಡಾದ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಕೂರ್ನಡ್ಕ ಡಿ.ಕೆ. ಅಬ್ದುಲ್ ರಹಿಮಾನ್ ನಿಧನ..!!

    ಪುಡಾದ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಕೂರ್ನಡ್ಕ ಡಿ.ಕೆ. ಅಬ್ದುಲ್ ರಹಿಮಾನ್ ನಿಧನ..!!

    ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ಅಪಘಾತ ಕೆ.ಎಸ್.ಆರ್.ಟಿ.ಸಿ. ಬಸ್‌ : ಟೆಂಪೋ ಟ್ರಾವೆಲ್ಲರ್ ಡಿಕ್ಕಿ : ಮಹಿಳೆ ಮೃತ್ಯು, ಏಳು ಮಂದಿಗೆ ಗಾಯ…!!!

    ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ಅಪಘಾತ ಕೆ.ಎಸ್.ಆರ್.ಟಿ.ಸಿ. ಬಸ್‌ : ಟೆಂಪೋ ಟ್ರಾವೆಲ್ಲರ್ ಡಿಕ್ಕಿ : ಮಹಿಳೆ ಮೃತ್ಯು, ಏಳು ಮಂದಿಗೆ ಗಾಯ…!!!

    ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಸಿಸಿಬಿ ಬಲೆಗೆ..!!

    ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಸಿಸಿಬಿ ಬಲೆಗೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ರಾಷ್ಟ್ರೀಯ

ಆರು ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಮಗ: ಕೊನೆಗೂ ಕೇಳಿಸಿತು ಕರುಳಿನ ಕೂಗು..!!

March 12, 2022
in ರಾಷ್ಟ್ರೀಯ
0
ಆರು ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಮಗ: ಕೊನೆಗೂ ಕೇಳಿಸಿತು ಕರುಳಿನ ಕೂಗು..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಕರುಳಿನ ಕೂಗು, ಕರುಳಿನ ಸಂಕಟ, ಕರುಳಿನ ಕಣ್ಣೀರು.. ಅನುಭವಿಸಿ ನೋವುಂಡವರಿಗಷ್ಟೇ ಗೊತ್ತು. ಈ ಸಂಕಷ್ಟ ನಿವಾರಣೆಗೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಹುಡುಕಿದರೂ ಗುಳಿಗೆ ಸಿಗಲ್ಲ. ಸಂಕಟ ಬಂದಾಗ ವೆಂಕಟರಮಣ ಎಂದು ದೇವರ ಮೊರೆ ಹೋದರೂ ನೆಮ್ಮದಿ ಇರಲ್ಲ. ಕೋಟಿ ಕೋಟಿ ಹಣದ ಸುಪತ್ತಿಗೆ ಸಿಕ್ಕರೂ ಮನಸ್ಸಿನಾಳದ ನೋವು ನಿವಾರಣೆಯಾಗಲ್ಲ. ಜನ್ಮ ನೀಡಿದ ಕೂಸು ‘ಮಾತೃ ಹೃದಯ’ದ ಮುಂದೆ ಇದ್ದರಷ್ಟೇ ನೆಮ್ಮದಿ, ಸಂತೋಷ, ಅದಕ್ಕೊಂದು ಬೆಲೆ.

Advertisement
Advertisement

ಹೀಗಿರುವಾಗ ಪ್ರಪಂಚಕ್ಕೆ ಕಾಲಿಟ್ಟ ಕರುಳ ಬಳ್ಳಿಯೊಂದು ಅಮ್ಮನ ಮಡಿಲಿನಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟರೆ, ಏನಾಗಬೇಡ ಹೇಳಿ.? ಎದೆ ಒಡೆದು ಹೃದಯ ಬಾಯಿಗೆ ಬಂದ ತಳಮಳ.. ನೆನಪು ಆದಾಗೆಲ್ಲ ಸಂಕಟ.. ಕೂತಲ್ಲಿ, ನಿಂತಲ್ಲ, ಹೋದಲೆಲ್ಲಾ ಅದೇ ನೋವು, ಅದೇ ಕಣ್ಣೀರು.. ಹೀಗೆ ಬರೋಬ್ಬರಿ 6 ವರ್ಷಗಳಿಂದ ಕಂದಮ್ಮನಿಗಾಗಿ ರೋಧಿಸುತ್ತಿದ್ದ ತಾಯಿ ಒಬ್ಬರಿಗೆ ಖುಷಿ ಸುದ್ದಿ ಸಿಕ್ಕಿದೆ. ಮನೆಯಲ್ಲಿ ಹರ್ಷೋದ್ಘಾರ ಮೊಳಗಿದೆ.

ಹೌದು.. ಇದೊಂಥರಾ ‘ಭಜರಂಗಿ ಭಾಯಿಜಾನ್’ ಸಿನಿಮಾದ ಕಥೆ ಥರಾನೇ. 2016ರಲ್ಲಿ ಮಾತು ಬಾರದ ಭರತ್ ಎಂಬ ಹುಡುಗ ಅಮ್ಮನ ಜೊತೆ ಯಲಹಂಕ ಮಾರುಕಟ್ಟೆಗೆ ತರಕಾರಿ ಮಾರಲು ಬಂದಿದ್ದ. ಸಿಂಗನಾಯಕನಹಳ್ಳಿಯ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಇದ್ದಕ್ಕಿದ್ದಂತೆ ಜನರ ಸಂತೆಯಲ್ಲಿ ಅಮ್ಮನ ಮಡಿಲಿನಿಂದ ಕಾಣೆಯಾಗಿಬಿಟ್ಟಿದ್ದ. ಮಗನನ್ನ ಕಳೆದುಕೊಂಡ ತಾಯಿ ಪಾರ್ವತಿ, ಎಲ್ಲಾ ಕಡೆ ಹುಡುಕಾಟ ನಡೆಸ್ತಾರೆ. ಇಡೀ ಮಾರುಕಟ್ಟೆ ಹುಡುಕಿದರೂ ಎಲ್ಲಿಯೂ ಮಗನ ಸುಳಿವು ಸಿಗುವುದಿಲ್ಲ. ಗಾಬರಿಗೊಂಡ ತಾಯಿ ಯಲಹಂಕ ಠಾಣೆಗೆ ದೂರು ನೀಡಿದ್ದರು. ಆದರೆ ಕಳೆದುಹೋದ ಮಗನ ಪತ್ತೆ ಆಗಲೇ ಇಲ್ಲ.

Advertisement

ಎಲ್ಲಿಗೆ ಹೋಗಿದ್ದ ಹುಡುಗ..?

ಅಮ್ಮನ ಕಳೆದುಕೊಂಡ ಮಗ ಭರತ್ ಕೂಡ ಹುಡುಕಾಟ ನಡೆಸಿದ. ಅಮ್ಮ ಎಲ್ಲಿದ್ದಾಳೆ..? ಹೇಗೆ ಹೋಗಬೇಕು ಅಂತೆಲ್ಲಾ ತಡಕಾಡಿದ್ದ. ಮಾತು ಬಾರದ ಹಿನ್ನೆಲೆಯಲ್ಲಿ ಮಡಿಲು ಸೇರಲು ಆಗಲಿಲ್ಲ. ದಿಕ್ಕು ತೋಚದಂತಾದ ಭರತ್, ಯಲಹಂಕ ರೈಲ್ವೇ ನಿಲ್ದಾಣಕ್ಕೆ ಬಂದು ಅಲ್ಲಿಂದ ಮಹಾರಷ್ಟ್ರದ ನಾಗಪುರಕ್ಕೆ ಹೋಗಿಬಿಟ್ಟ. ಕಾಣೆಯಾದ ಎರಡು ಮೂರು ದಿನಕ್ಕೆ ಆತ ಅಲ್ಲಿಗೆ ಹೋಗಿದ್ದಲ್ಲ. ಅಮ್ಮನಿಂದ ತಪ್ಪಿಸಿಕೊಂಡು ಬರೋಬ್ಬರಿ 10 ತಿಂಗಳ ಬಳಿಕ ಅಲ್ಲಿಗೆ ಹೋಗಿದ್ದ ಅನ್ನೋ ಮಾಹಿತಿ ಇದೆ. ಕೊನೆಗೊಂದು ದಿನ ನಾಗ್ಪುರ ರೈಲ್ವೇ ನಿಲ್ದಾಣವನ್ನ ಸೇರಿದ್ದ ಭರತನನ್ನ, ಅಲ್ಲಿನ ಅಧಿಕಾರಿಗಳು ಗಮನಿಸುತ್ತಾರೆ. ನಂತರ ಪುನರ್ವಸತಿ ಕೇಂದ್ರಕ್ಕೆ ಆತನನ್ನ ಸೇರಿಸುತ್ತಾರೆ.

ಭರತ್ ಅಮ್ಮನ ಮಡಿಲು ಸೇರಿದ್ದು ಹೇಗೆ..?

ಭರತ್ ಅದಾಗಲೇ ಮಹಾರಾಷ್ಟ್ರಕ್ಕೆ ಹೋಗಿ ಬರೋಬ್ಬರಿ 6 ವರ್ಷಗಳೇ ಕಳೆದುಹೋಗಿತ್ತು. ಪುನರ್ವಸತಿ ಕೇಂದ್ರದಲ್ಲಿರುವ ಅಧಿಕಾರಿಗಳು, ಭರತ್​​ಗೆ ಆಧಾರ್ ಕಾರ್ಡ್ ಮಾಡಿಸಲು ನಿರ್ಧರಿಸಿದ್ದರು. ಅದರಂತೆ, 2022, ಜನವರಿಯಲ್ಲಿ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿ ಆಧಾರ್​ ಕಾರ್ಡ್​​ ಮಾಡಿಸಲು ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನ ಮಾಡಲಾಗಿತ್ತು.

ಆದರೆ ಕೆಲ ದಿನಗಳ ಬಳಿಕ ಭರತ್‌ನ ಹೊಸ ಆಧಾರ್ ಕಾರ್ಡ್ ತಿರಸ್ಕೃತ ಆಗಿರುವ ಬಗ್ಗೆ ಆಧಾರ್ ಸೇವಾ ಕೇಂದ್ರ ಅಧಿಕಾರಿ ಅನಿಲ್ ಮರಾಠೆ ಮಾಹಿತಿ ನೀಡಿದರು. ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಯಲ್ಲಿರುವ ಬಗ್ಗೆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ತಿಳಿಸಿದರು. ವಿಷಯ ಗೊತ್ತಾದ ಕೂಡಲೇ ಭರತ್ ಪೋಷಕರ ವಿಳಾಸ ಪತ್ತೆಗೆ ಪುನರ್ವಸತಿ ಕೇಂದ್ರ ಅಧಿಕಾರಿ ಮಹೇಶ್ ನೇತೃತ್ವದಲ್ಲಿ ಪ್ರಯತ್ನ ನಡೆಯುತ್ತದೆ.

ಬಿ.ಭರತ್ ಕುಮಾರ್ ಹೆಸರಿನಲ್ಲಿದ್ದ ವ್ಯಕ್ತಿಯ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡಕ್ಕೂ ಸಾಮ್ಯತೆ ಇರೋದು ಕಂಡು ಬಂದಿದೆ. ಅಲ್ಲದೇ ಆ ಆಧಾರ್ ಕಾರ್ಡ್‌ನಲ್ಲಿ ಭರತ್‌ನ ತಾಯಿ, ಪಾರ್ವತಮ್ಮ ಅವರ ಮೊಬೈಲ್ ನಂಬರ್ ಇರೋದು ಗೊತ್ತಾಗಿದೆ. ಇದರಿಂದ ಮತ್ತಷ್ಟು ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡುತ್ತಾರೆ.

ಕರುಳಿನ ಕೂಗು ಕರೆಯುತ್ತಲೇ ಇತ್ತು..!

ಕೊನೆಗೆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಯಲಹಂಕ ಪೊಲೀಸರನ್ನು ಸಂಪರ್ಕಸ್ತಾರೆ. ಯಲಹಂಕ ಪೊಲೀಸರು ಕೊನೆಗೂ ಪಾರ್ವತಮ್ಮ ಅವರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ. ಕೂಡಲೇ ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್, ಪಾರ್ವತಮ್ಮ ಅವರನ್ನ ನಾಗ್ಪುರಕ್ಕೆ ಕಳುಹಿಸುತ್ತಾರೆ. ಮಾರ್ಚ್ 7 ರಂದು 19 ವರ್ಷದ ಮಗನನ್ನು ಕಂಡು ಪಾರ್ವತಮ್ಮ ಭಾವುಕರಾಗುತ್ತಾರೆ. ಅದಾದ ಎರಡು ದಿನಗಳ ಬಳಿಕ ಮಗನನ್ನು ಮನೆಗೆ ಕರೆದುಕೊಂಡು ಬರುತ್ತಾರೆ.

ತಾಯಿ ಮಗನ ಬೆಸುಗೆ ತಪ್ಪಿ 6 ವರ್ಷಗಳೇ ಕಳೆದು ಹೋಗಿತ್ತು. ಕಾಣೆಯಾದ ಪುತ್ರನಿಗೆ ಹಂಬಲಿಸಿ ದೇವರಿಗೆ ಮಾಡಿಕೊಂಡ ಹರಕೆಗಳು ಲೆಕ್ಕಕ್ಕೇ ಇಲ್ಲವಂತೆ. ಕೊನೆಗೂ ಸುಪುತ್ರ ಮನೆ ಸೇರಿರುವ ಸಂತೋಷ ಪಾರ್ವತಮ್ಮರಲ್ಲಿ ತುಂಬಿದೆ. ಇಲ್ಲಿ ಭಾಯಿಜಾನ್ ನಂತೆ ಕಾರ್ಯ ನಿರ್ವಹಿಸಿರುವ ಪುನರ್ ವಸತಿ ಕೇಂದ್ರ ಮತ್ತು ಆಧಾರ್ ಕೇಂದ್ರದ ಅಧಿಕಾರಿಗಳಿಗೂ ಸಲಾಂ ಹೇಳಲೇಬೇಕು.

Previous Post

ಪಾಕ್‌ ಯುವತಿಯನ್ನು ಮದುವೆಯಾದ ದಿನವೇ ಬಾಂಬ್‌ ಸ್ಫೋಟದಲ್ಲಿ ಸಾವನ್ನಪ್ಪಿದ ಕೇರಳ ಮೂಲದ ಉಗ್ರ..!!

Next Post

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್‌: ಉಡುಪಿಯ ಮೂವರ ವಿರುದ್ಧ ಪ್ರಕರಣ ದಾಖಲು..!!

OtherNews

3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!
ಆವಿಷ್ಕಾರ

3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!

May 16, 2026
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!
Featured

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!

March 16, 2026
ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!

March 25, 2025

Leave a Reply Cancel reply

Your email address will not be published. Required fields are marked *

Recent News

ಮಂಗಳೂರು: ಬೀಟ್ ಪೊಲೀಸರ ಮೇಲೆ ಹಲ್ಲೆ : ಪುತ್ತೂರಿನ ಯುವಕ ಸಹಿತ ಇಬ್ಬರು ಆರೋಪಿಗಳ ಬಂಧನ..!!

ಮಂಗಳೂರು: ಬೀಟ್ ಪೊಲೀಸರ ಮೇಲೆ ಹಲ್ಲೆ : ಪುತ್ತೂರಿನ ಯುವಕ ಸಹಿತ ಇಬ್ಬರು ಆರೋಪಿಗಳ ಬಂಧನ..!!

May 27, 2026
ದುಬೈ ಅಪಘಾತದಲ್ಲಿ ಗಾಯಗೊಂಡಿದ್ದ ಮುಲ್ಕಿಯ ಪ್ರತಿಭಾನ್ವಿತ ಯುವತಿ ಶ್ರೀಲತಾ ತಂತ್ರಿ ನಿಧನ..!!

ದುಬೈ ಅಪಘಾತದಲ್ಲಿ ಗಾಯಗೊಂಡಿದ್ದ ಮುಲ್ಕಿಯ ಪ್ರತಿಭಾನ್ವಿತ ಯುವತಿ ಶ್ರೀಲತಾ ತಂತ್ರಿ ನಿಧನ..!!

May 27, 2026
ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು..!!

ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು..!!

May 26, 2026
ಪುಡಾದ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಕೂರ್ನಡ್ಕ ಡಿ.ಕೆ. ಅಬ್ದುಲ್ ರಹಿಮಾನ್ ನಿಧನ..!!

ಪುಡಾದ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಕೂರ್ನಡ್ಕ ಡಿ.ಕೆ. ಅಬ್ದುಲ್ ರಹಿಮಾನ್ ನಿಧನ..!!

May 26, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.