ಪುತ್ತೂರು : ಹಿಂದೂ ಜಾಗರಣ ವೇದಿಕೆ, ಪುತ್ತೂರು ವತಿಯಿಂದ ಮಾ.21 ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಸಾರ್ವಜನಿಕ ಶ್ರೀ “ಸತ್ಯನಾರಾಯಣ ಪೂಜೆ ಮತ್ತು ಹಿಂದು ಐಕ್ಯತಾ ಸಮಾವೇಶ” ಬೃಹತ್ ಶೋಭಾಯಾತ್ರೆಯು ನಡೆಯಲಿದೆ.
ಈ ಸಮಾವೇಶಕ್ಕಾಗಿ ಇಡೀ ಪುತ್ತೂರು ನಗರವೇ ಕೇಸರಿಮಯವಾಗಿ ಸಿದ್ಧಗೊಂಡಿದೆ. ನಗರದ ಎಲ್ಲೆಡೆ ಬಂಟಿಂಗ್ಸ್, ಬ್ಯಾನರ್ಗಳಿಂದ ಅಲಂಕರಿಸಲಾಗಿದ್ದು ಸೂರ್ಯರಶ್ಮಿಯ ಕಿರಣಗಳು ಭುವಿಗೆ ಚುಂಬಿಸುವಂತೆ ಕಂಗೊಳಿಸುತ್ತಿದೆ.
![](https://zoomintv.online/wp-content/uploads/2021/03/WhatsApp-Image-2021-03-18-at-3.48.12-PM-1024x576.jpeg)
![](https://zoomintv.online/wp-content/uploads/2021/03/WhatsApp-Image-2021-03-18-at-3.13.47-PM-1-1024x462.jpeg)
![](https://zoomintv.online/wp-content/uploads/2021/03/puttr-1024x475.jpeg)