ಪುತ್ತೂರು : ಹಿಂದೂ ದೇವರುಗಳಿಗೆ ಅವಮಾನಿಸಿದ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಪುತ್ತೂರು ನಿವಾಸಿ ಶೈಲಜಾ ಅಮರನಾಥ್ ಅವರನ್ನು ಕೂಡಲೇ ಬಂಧಿಸಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ವಿಕ್ರಂ ಚಾನೆಲ್ ಮತ್ತು ಅದರ ನಿರೂಪಕಿ ಮುಮ್ತಾಜ್ ಮೇಲೆ ಹಾಕಲಾಗಿರುವ ಕೇಸನ್ನು ಹಿಂಪಡೆಯಬೇಕು ಮತ್ತು ಹಿಂದುಗಳ ಆರಾಧ್ಯ ದೇವರುಗಳ ಅವಹೇಳನ ಮಾಡಿದ ಶೈಲಜಾ ಅಮರನಾಥ್ ರನ್ನು ಬಂಧಿಸಬೇಕು ಇಲ್ಲವಾದರೆ ಹೋರಾಟ ನಡೆಸುವುದಾಗಿ ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್ ಆನಡ್ಕ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ, ಮಹಾಲಕ್ಷ್ಮೀ ಶೆಟ್ಟಿ, ಅನಿಲ್, ಪ್ರವೀಣ ಎಂಬವರು ಸೇರಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಳ ಅಪಮಾನ ಮಾಡಿ ಮಾತನಾಡುತ್ತಿದ್ದ ಆಡಿಯೋ ವೈರಲ್ ಆಗಿತ್ತು.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.