ಬಂಟ್ವಾಳ: ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡು ಕೊಲೆಗೈದ ಘಟನೆ ಜು.4 ರಂದು ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ನಡೆದಿದೆ.
ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ.
ಕೊಲೆಗೈದ ಆರೋಪಿಗಳನ್ನು ಮಹಮ್ಮದ್ ನೌಫಲ್ ಮಾರಿಪಳ್ಳ, ಮಹಮ್ಮದ್ ನೌಸೀರ್ ಮಾರಿಪಳ್ಳ ಎಂದು ಗುರುತಿಸಲಾಗಿದೆ.
ಆಸೀಫ್ ಸ್ನೇಹಿತ ಮಹಮ್ಮದ್ ನೌಫಲ್ ನೀಡಿದ ದೂರಿನ ಮೇರೆಗೆ ಆರೋಪಿಗಳಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ನೌಫಲ್ ಮನೆಯಲ್ಲಿದ್ದ ವೇಳೆ ಆತನ ಗೆಳಯ ಆಸೀಫನು ಕರೆ ಮಾಡಿ ಶಾಂತಿಯಂಗಡಿ ಸ್ಟೋರ್ ಬಳಿ ಇದ್ದೇನೆ ಮಾರಿಪಳ್ಳ ಮಹಮ್ಮದ್ ನೌಫೆಲ್, ಮಹಮ್ಮದ್ ನೌಸೀರ ನನ್ನನ್ನು ಸ್ಕೂಟಿ ಜೊತೆಗೆ ತಡೆದು ಹೊಡೆಯಲು ಬಂದು ಧಮ್ಕಿ ಹಾಕುತ್ತಿದ್ದಾರೆ ಕೂಡಲೇ ಬರುವಂತೆ ಹೇಳಿದ್ದು, ಆಗ ನೌಫಲ್ ಆಸೀಫನ ತಮ್ಮ, ಅನ್ಸಾರ, ಗೆಳಯರಾದ ಕೌಶಿಕ್, ನಿಜಾಮುದ್ದೀನ ಸೇರಿಕೊಂಡು ಶಾಂತಿಯಂಗಡಿ ಸ್ಟೋರ್ ಬಳಿ ಮೋಟಾರ ಸೈಕಲ್ ನಲ್ಲಿ ಹೋಗಿದ್ದು, ಅಲ್ಲಿದ್ದ ಆಸೀಫ್ ನನ್ನು ನೌಫಲ್ ವಿಚಾರಿಸಿದಾಗ ಮಹಮ್ಮದ್ ನೌಫಲ್ ಮತ್ತು ನೌಸಿರ್, ನೌಫಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ನಂತರ ಪೊನ್ನೊಡಿಯ ಲಗೂನ್ ಕೊಕೊನೆಟ್ ಹೋಟೆಲ್ ಹೊಟೇಲ್ ಬಳಿ ಇರುವ ಗೂಡಂಗಡಿ ಹತ್ತಿರ ಬರುವಂತೆ ಹೇಳಿ ಆರೋಪಿಗಳಿಬ್ಬರು ತೆರಳಿದ್ದು, ನಂತರ ಆಸೀಫ್ ಮತ್ತು ನೌಫಲ್ ಅಲ್ಲಿಗೆ ತೆರಳಿ, ನೌಫಲ್ ಯಾಕೆ ನೀವು ಆಸೀಫನಿಗೆ ಹೊಡೆದು ಧಮ್ಕಿ ಹಾಕಿದ್ದೀರಿ ಎಂದು ವಿಚಾರ ಮಾಡುತ್ತಿದ್ದಂತೆಯೂ ನೌಫಾಲ್ ನು ನೀನು ಬಾರಿ ಪಂಚಾಯತಿಗೆ ಮಾಡುತ್ತೀಯ ಎಂದು ಬೈದು ಮರದ ಸೊಂಟೆಯಿಂದ ನೌಫಲ್ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ತಡೆಯಲು ಬಂದಾಗ ಆಸೀಫ್ ಗೆ ಅವಾಚ್ಯ ಶಬ್ದಗಳಿಂದ ಬೈದು ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ವೇಳೆ ಗಂಭೀರ ಗಾಯಗೊಂಡ ಆಸೀಫ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಪ್ರತಿದಿನ ಪೊನ್ನೊಡಿಯಲ್ಲಿರುವ ಲಗೂನ ಕೊಕೊನೆಟ್ ಹೊಟೇಲ್ ಬಳಿ ಆಸೀಫ್ ನು ತನ್ನ ಡಿಯೋ ಮೋಟಾರ ಸೈಕಲ್ ನಲ್ಲಿ ಹೋಗುತ್ತಿರುವಾಗ ನೌಫಲ್ ಮತ್ತು ನೌಸೀರ್ ಆತನನ್ನು ನೋಡಿ ಸುಖಾ ಸುಮ್ಮನೆ ಹಾರನ್ ಹಾಕುತ್ತಾನೆ ಎಂದು ದ್ವೇಷದಿಂದ ಕೈಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದಲ್ಲದೆ ವಿಚಾರಿಸಲು ಹೋದಾಗ ನೌಪಾಲ್ ನು ಚೂರಿಯಿಂದ ಆಸೀಫ್ ನಿಗೆ ತಿವಿದು ತ್ರೀವ ಗಾಯಗೊಳಿಸಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ 67/2022 ಕಲಂ: 323, 504, 324, 506, 302 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಯುವಕರ ತಂಡವೂ ಗಾಂಜಾ ವ್ಯಸನಿಗಳಾಗಿದ್ದು, ಈ ಮತ್ತಿನಲ್ಲಿ ಈ ರೀತಿಯ ಕೃತ್ಯವೆಸಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬರುತ್ತಿದೆ..