Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!

    ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!

    (ಮಾ.05) ಉಪ್ಪಿನಂಗಡಿ ನಾಗಮಂಡಲದ ಆಮಂತ್ರಣ ಪತ್ರ ಬಿಡುಗಡೆ..!!

    (ಮಾ.05) ಉಪ್ಪಿನಂಗಡಿ ನಾಗಮಂಡಲದ ಆಮಂತ್ರಣ ಪತ್ರ ಬಿಡುಗಡೆ..!!

    ಉಪ್ಪಿನಂಗಡಿ: ಆಕ್ರಮ ಕೋಳಿ ಅಂಕದ ಮೇಲೆ ದಾಳಿ – ಮೂವರು ವಶಕ್ಕೆ..!!

    ಉಪ್ಪಿನಂಗಡಿ: ಆಕ್ರಮ ಕೋಳಿ ಅಂಕದ ಮೇಲೆ ದಾಳಿ – ಮೂವರು ವಶಕ್ಕೆ..!!

    ಪುತ್ತೂರಿನಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ; ಆರೋಪಿತ ಬಂಧನ..!!

    ಪುತ್ತೂರಿನಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ; ಆರೋಪಿತ ಬಂಧನ..!!

    ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!

    ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!

    (ಮಾ.04): ಶಿಬರಿ ಯುವಕ ಮಂಡಲದಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ..!!

    (ಮಾ.04): ಶಿಬರಿ ಯುವಕ ಮಂಡಲದಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!

    ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!

    (ಮಾ.05) ಉಪ್ಪಿನಂಗಡಿ ನಾಗಮಂಡಲದ ಆಮಂತ್ರಣ ಪತ್ರ ಬಿಡುಗಡೆ..!!

    (ಮಾ.05) ಉಪ್ಪಿನಂಗಡಿ ನಾಗಮಂಡಲದ ಆಮಂತ್ರಣ ಪತ್ರ ಬಿಡುಗಡೆ..!!

    ಉಪ್ಪಿನಂಗಡಿ: ಆಕ್ರಮ ಕೋಳಿ ಅಂಕದ ಮೇಲೆ ದಾಳಿ – ಮೂವರು ವಶಕ್ಕೆ..!!

    ಉಪ್ಪಿನಂಗಡಿ: ಆಕ್ರಮ ಕೋಳಿ ಅಂಕದ ಮೇಲೆ ದಾಳಿ – ಮೂವರು ವಶಕ್ಕೆ..!!

    ಪುತ್ತೂರಿನಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ; ಆರೋಪಿತ ಬಂಧನ..!!

    ಪುತ್ತೂರಿನಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ; ಆರೋಪಿತ ಬಂಧನ..!!

    ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!

    ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!

    (ಮಾ.04): ಶಿಬರಿ ಯುವಕ ಮಂಡಲದಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ..!!

    (ಮಾ.04): ಶಿಬರಿ ಯುವಕ ಮಂಡಲದಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home Featured

ಬೆಟ್ಟಂಪಾಡಿ: ಸರ ಕಳ್ಳರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು..!!

July 18, 2022
in Featured, ಕ್ರೈಮ್, ಪುತ್ತೂರು
0
ಬೆಟ್ಟಂಪಾಡಿ: ಸರ ಕಳ್ಳರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಬೆಟ್ಟಂಪಾಡಿ: ತಿಂಗಳ ಹಿಂದೆ ಬೆಟ್ಟಂಪಾಡಿ ಪರಿಸರದಲ್ಲಿ ಹಾಡಹಗಲೇ ಮಹಿಳೆಯ ಕತ್ತಿನಿಂದ ಕರಿಮಣಿ ಸರ ಒಯ್ದ ಸರಗಳ್ಳರನ್ನು ಬೆಟ್ಟಂಪಾಡಿಯ ಯುವಕರೇ ಹೆಡೆಮುರಿ ಕಟ್ಟಿ ಸಾರ್ವಜನಿಕವಾಗಿ ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಜು. 18 ರಂದು ಮಧ್ಯಾಹ್ನ ನಡೆದಿದೆ.

Advertisement
Advertisement
Advertisement

ಯುವಕರ ಧೈರ್ಯ ಮತ್ತು ಸಾಹಸ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಗಿದೆ.

ಇಂದು ಬೆಳಗ್ಗಿನಿಂದಲೇ ಮತ್ತೊಮ್ಮೆ ಕಳ್ಳತನಕ್ಕಾಗಿ ಹೊಂಚುbಹಾಕುತ್ತಿದ್ದ ಕಳ್ಳರನ್ನು ಅನುಮಾನ ಬಂದ ಸ್ಥಳೀಯ ಯುವಕರು ಅಟ್ಟಾಡಿಸಿ ಹಿಡಿದಿದ್ದಾರೆ. ಬಳಿಕ ರೆಂಜ ಸರ್ಕಲ್ ಬಳಿ ಕಟ್ಟಿ ಹಾಕಿ ಸಾರ್ವಜನಿಕವಾಗಿ ಗೂಸಾ ನೀಡಿ ಇದೀಗ ಪೊಲೀಸರಿಗೊಪ್ಪಿಸಿದ್ದಾರೆ.

Advertisement
Advertisement

ಜೂನ್ 7 ರಂದು ಬೆಟ್ಟಂಪಾಡಿ ಕೋನಡ್ಕದ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಬುಲೆಟ್ ಬೈಕ್ ನಲ್ಲಿ ಬಂದಿದ್ದ ಅಪರಿಚಿತರೀರ್ವರು ಮಹಿಳೆಯ ಕತ್ತಿಗೆ ಕೈ ಹಾಕಿ ಕರಿಮಣಿ ಸರ ಒಯ್ದಿದ್ದರು. ಕದಿಯುವ‌ ಮೊದಲು ಈ ಪರಿಸರದಲ್ಲಿ ಸುತ್ತಾಡಿದ್ದರಿಂದ ಸ್ಥಳೀಯ ಯುವಕರಿಗೆ ಅನುಮಾನ ಬಂದು ಪೊಲೀಸರಿಗೂ ತಿಳಿಸಿದ್ದರು. ಆದರೆ ಸರ ಕದ್ದೊಯ್ದ ಕಳ್ಳರು ಪರಾರಿಯಾಗಿದ್ದರು. ಪೊಲೀಸರು ಈ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸುತ್ತಾ ಕಳ್ಳರ ಹಿಂದೆ ಬಿದ್ದಿದ್ದರೂ ಅವರ ಪತ್ತೆಯಾಗಿರಲಿಲ್ಲ.

ಜು. 18 ರಂದು ಮತ್ತೆ ಇದೇ ಕಳ್ಳರು ಎಫ್‌ಝಡ್ ಬೈಕ್‌ನಲ್ಲಿ ಬಂದಿದ್ದರೆನ್ನಲಾಗಿದೆ. ಸ್ಥಳೀಯ ಯುವಕರೂ ತಿಂಗಳ ಹಿಂದೆ ನಡೆದ ಸರಗಳ್ಳತನವನ್ನು ಮರೆತಿರಲಿಲ್ಲ. ಒಂದಲ್ಲ ಒಂದು ದಿನ ಕಳ್ಳರು ಸಿಕ್ಕೇ ಸಿಗುತ್ತಾರೆ ಎಂದು ಹದ್ದಿನ ಕಣ್ಣಿಟ್ಟಿದ್ದರು. ಆ ದಿನ ಬಂದೇ ಬಿಟ್ಟಿತು. ಬೈಕ್ ಬದಲಾಯಿಸಿದರೂ ಕಳ್ಳರ ಮುಖ ಪರಿಚಯ ಇಟ್ಟುಕೊಂಡಿದ್ದ ಸ್ಥಳೀಯರಿಗೆ ಅದೇ ಕಳ್ಳರು ಇವರೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ.

ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ:

ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಿಸಿದಂತೆ ಇಲ್ಲಿ ಸಾರ್ವಜನಿಕರೇ ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ಕಾರ್ಯಾಚರಣೆ ಮಾಡಿದ್ದಾರೆ. ಎಫ್‌ಝಡ್ ಬೈಕ್ ನಲ್ಲಿ ಅಪರಿಚಿತ ಮತ್ತು ಅನುಮಾನಾಸ್ಪದ ಈರ್ವರು ಪಾಣಾಜೆ ಕಡೆಯಿಂದ ಪುತ್ತೂರು ಕಡೆಗೆ ಚಲಿಸುತ್ತಿರುವುದನ್ನು ಗಮನಿಸಿ ಆರ್ಲಪದವು ಎಂಬಲ್ಲಿಂದ ರೆಂಜ ಬೆಟ್ಟಂಪಾಡಿ ಪರಿಸರದವರಿಗೆ ಸುಳಿವು ನೀಡಲಾಯಿತು.

ತಕ್ಷಣ ಕಾರ್ಯಪ್ರವೃತ್ತರಾದ ಬೆಟ್ಟಂಪಾಡಿಯ ಯುವಕರು ಮಿತ್ತಡ್ಕ ಕೇಸರಿ ನಗರದಲ್ಲಿ ರಿಕ್ಷಾ ಅಡ್ಡ ಹಾಕಿ ನಿಲ್ಲಿಸಲು ಪ್ರಯತ್ನಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಅವರು ಪುತ್ತೂರು ಕಡೆಗೆ ಹೋಗಿದ್ದರು. ಯುವಕರ ನೆಟ್‌ವರ್ಕ್ ಇಲ್ಲಿ ಕ್ಷಣಾರ್ಧದಲ್ಲಿ ಮಿಂಚಿನ ರೀತಿಯಲ್ಲಿ ಕಾರ್ಯಾಚರಿಸಿತು. ಸಂಟ್ಯಾರ್ ನಲ್ಲಿ ಬೈಕ್ ನ್ನು ಅಡ್ಡಹಾಕಲು ಪ್ರಯತ್ನಿಸಲಾಯಿತು. ಆದರೆ ಅಲ್ಲಿಂದ ತಿರುಗಿ ಹೋದ ಕಳ್ಳರು ಚೆಲ್ಯಡ್ಕದಿಂದ ಗುಮ್ಮಟೆಗದ್ದೆ ದೇವಸ್ಯ ಮಾರ್ಗವಾಗಿ ಮತ್ತೆ ಪುತ್ತೂರಿಗೆ ಬಂದು ಸಂಟ್ಯಾರ್ ಮೂಲಕ ವಾಪಾಸಾಗಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ ಐ ಉದಯರವಿಯವರ ನೇತೃತ್ವದಲ್ಲಿ ಪೊಲೀಸರೂ ಕಳ್ಳರ ಹುಡುಕಾಟದಲ್ಲಿ ನಿರತರಾಗಿದ್ದರು. ಆದರೆ ಪುತ್ತೂರಿನಿಂದ ಸಂಟ್ಯಾರ್ ಮಾರ್ಗವಾಗಿ ವಾಪಸಾಗುತ್ತಿದ್ದಂತೆ ಕಳ್ಳರ ಪ್ಲ್ಯಾನ್ ಕಂಪ್ಲೀಟ್ ಕೈ ಕೊಟ್ಟಿತ್ತು. ಸಂಟ್ಯಾರ್ ನಲ್ಲಿ ಪಾಸಾದ ಬಗ್ಗೆ ಮತ್ತೆ ಬೆಟ್ಟಂಪಾಡಿಯ ಯುವಕರಿಗೆ ಮಾಹಿತಿ ನೀಡಲಾಯಿತು.

ರೆಂಜ ಜಂಕ್ಷನ್ ನಲ್ಲಿ ಯುವಕರು ಪೊಲೀಸ್ ಬ್ಯಾರಿಕೇಡ್ ಎಳೆದು ಅಡ್ಡಹಾಕಿದರು. ಬ್ಯಾರಿಕೇಡ್ ಗೆ ಗುದ್ದಿ ಮಗುಚಿಬಿದ್ದ ಬೈಕ್ ನಿಂದ ಎಗರಿದ ಕಳ್ಳರು ಸ್ಥಳೀಯ ತೋಟದಲ್ಲಿ ಓಡಿ ಪರಾರಿಯಾಗಲು ಯತ್ನಿಸಿದ್ದರು. ಬೆಂಬಿಡದ ಯುವಕರು ಅಟ್ಟಾಡಿಸಿ ಈರ್ವರನ್ನೂ ಹಿಡಿದು ಕಟ್ಟಿಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಮಾಯಿಸಿದ ನೂರಾರು ಮಂದಿ:

ಕಳ್ಳರನ್ನು ಹಿಡಿದ ಸುದ್ದಿ ಹರಡಿದಾಕ್ಷಣ ರೆಂಜ ಜಂಕ್ಷನ್ ನಲ್ಲಿ ನೂರಾರು ಮಂದಿ ಜಮಾಯಿಸಿದ್ದಾರೆ. ಸರಗಳ್ಳರ ಬಗ್ಗೆ ಕುಪಿತರಾಗಿದ್ದ ಕೆಲ ಮಂದಿ ತಮ್ಮ ಕೋಪವನ್ನು ಕೈಚಳಕದಲ್ಲಿಯೂ ತೋರಿಸಿದ್ದಾರೆ ಎನ್ನಲಾಗಿದೆ. ಅಂತೂ ತಿಂಗಳ ಬಳಿಕ ಮತ್ತೆ ತಮ್ಮ ಚಾಳಿಗೆ ಬಂದ ಕಳ್ಳರಿಗೆ ಈ ರೀತಿಯ ಗ್ರಹಸ್ಥಿತಿ ಬರುತ್ತದೆಂದೂ ಕನಸಿನಲ್ಲಿಯೂ ಎಣಿಸದ ಕಳ್ಳರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಒಂದಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೆ ಒಳಗಾದರೆ ಈ ಪರಿಸರದ ಅನೇಕ ಕಳ್ಳತನದ ಪ್ರಕರಣಕ್ಕೆ ಒಂದು ಅಂತ್ಯ ಸಿಗಬಹುದೇನೋ ಎಂಬ ಕುತೂಹಲದಲ್ಲಿದ್ದಾರೆ ಸಾರ್ವಜನಿಕರು.

ಯುವಕರ ಕಾರ್ಯಕ್ಕೆ ಶ್ಲಾಘನೆ

ತಪ್ಪಿಸಿಕೊಂಡು ಪರಾರಿಯಾಗಲೆತ್ನಿಸಿದ ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿರುವ ಯುವಕರ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಮುಕ್ತಕಂಠದ ಶ್ಲಾಘನೆ ವ್ಯಕ್ತವಾಗಿದೆ. ಘಟನೆಯಲ್ಲಿ ಸ್ಥಳೀಯ ಯುವಕನೋರ್ವನ ಕಾಲಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.

Advertisement
Previous Post

ಮುಂಡೂರು: ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪೂರ್ವಬಾವಿ ಸಭೆ

Next Post

ದಲಿತ ಮುಖಂಡ ಡೀಕಯ್ಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕುಟುಂಬಸ್ಥರು: ದಫನ್ ಮಾಡಿದ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳು..!!

OtherNews

ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!
ಕ್ರೈಮ್

ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!

March 5, 2026
(ಮಾ.05) ಉಪ್ಪಿನಂಗಡಿ ನಾಗಮಂಡಲದ ಆಮಂತ್ರಣ ಪತ್ರ ಬಿಡುಗಡೆ..!!
ಪುತ್ತೂರು

(ಮಾ.05) ಉಪ್ಪಿನಂಗಡಿ ನಾಗಮಂಡಲದ ಆಮಂತ್ರಣ ಪತ್ರ ಬಿಡುಗಡೆ..!!

March 5, 2026
ಉಪ್ಪಿನಂಗಡಿ: ಆಕ್ರಮ ಕೋಳಿ ಅಂಕದ ಮೇಲೆ ದಾಳಿ – ಮೂವರು ವಶಕ್ಕೆ..!!
Featured

ಉಪ್ಪಿನಂಗಡಿ: ಆಕ್ರಮ ಕೋಳಿ ಅಂಕದ ಮೇಲೆ ದಾಳಿ – ಮೂವರು ವಶಕ್ಕೆ..!!

March 5, 2026
ಪುತ್ತೂರಿನಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ; ಆರೋಪಿತ ಬಂಧನ..!!
Featured

ಪುತ್ತೂರಿನಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ; ಆರೋಪಿತ ಬಂಧನ..!!

March 5, 2026
ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!
Featured

ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!

March 4, 2026
ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ – ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ..!!
ಕ್ರೈಮ್

ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ – ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ..!!

March 4, 2026

Leave a Reply Cancel reply

Your email address will not be published. Required fields are marked *

Recent News

ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!

ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!

March 5, 2026
(ಮಾ.05) ಉಪ್ಪಿನಂಗಡಿ ನಾಗಮಂಡಲದ ಆಮಂತ್ರಣ ಪತ್ರ ಬಿಡುಗಡೆ..!!

(ಮಾ.05) ಉಪ್ಪಿನಂಗಡಿ ನಾಗಮಂಡಲದ ಆಮಂತ್ರಣ ಪತ್ರ ಬಿಡುಗಡೆ..!!

March 5, 2026
ಉಪ್ಪಿನಂಗಡಿ: ಆಕ್ರಮ ಕೋಳಿ ಅಂಕದ ಮೇಲೆ ದಾಳಿ – ಮೂವರು ವಶಕ್ಕೆ..!!

ಉಪ್ಪಿನಂಗಡಿ: ಆಕ್ರಮ ಕೋಳಿ ಅಂಕದ ಮೇಲೆ ದಾಳಿ – ಮೂವರು ವಶಕ್ಕೆ..!!

March 5, 2026
ಪುತ್ತೂರಿನಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ; ಆರೋಪಿತ ಬಂಧನ..!!

ಪುತ್ತೂರಿನಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ; ಆರೋಪಿತ ಬಂಧನ..!!

March 5, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page