ಪುತ್ತೂರು: ಫ್ರೆಂಡ್ಸ್ ಕ್ಲಬ್ ಸೇಡಿಯಾಪು ವತಿಯಿಂದ ಸೇಡಿಯಾಪು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಯಿತು.
ನಿವೃತ್ತ ಸೈನಿಕ ಪುಷ್ಪರಾಜ ಗೌಡ ಭಾರ್ತಿಕುಮಾರ್ ರವರು ಧ್ವಜಾರೋಹಣಗೈದರು.

ಕ್ಲಬ್ ನ ಗೌರವ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರು ಸ್ವಾಗತಿಸಿದರು, ಕಳೆದ ಕಾರ್ಯಕ್ರಮದಲ್ಲಿ ಕಣ್ಣುದಾನ ನೋಂದಾಯಿಸಿದ ದಾನಿಗಳಿಗೆ ಸರ್ಟಿಫಿಕೇಟನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆ ವೇದಾವತಿ ವಂದಿಸಿದರು .ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಚಂದ್ರಶೇಖರ್, ಕಾರ್ಯದರ್ಶಿ ಸತೀಶ್ ಮಡಿವಾಳ ,ಉದ್ಯಮಿ ಬಸಿರ್ ಹಾಜಿ ಅನಿಲ ಕೋಡಿ’ ವಾಸಪ್ಪಗೌಡ, ಗಣೇಶ್ ಹೆಗ್ಡೆ, ಇಬ್ರಾಹಿಂ, ಸಹಶಿಕ್ಷಕಿ ವೀಣಾ ಉಪಸ್ಥಿತರಿದ್ದರು.


























