ಪುತ್ತೂರು: ಮೂರು ವರ್ಷಗಳ ಹಿಂದೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ರವರ ಮೂರನೇ ವರ್ಷದ ಪುಣ್ಯತಿಥಿಯನ್ನು ಆ.3 ರಂದು ಆಚರಿಸಲಾಯಿತು.
![](https://zoomintv.online/wp-content/uploads/2022/09/WhatsApp-Image-2022-09-03-at-10.32.16-AM-1024x682.jpeg)
ಹಿಂದೂ ಜಾಗರಣ ವೇದಿಕೆ ಪುತ್ತೂರು ವತಿಯಿಂದ ಕಾರ್ತಿಕ್ ಮೇರ್ಲ ರವರ ಸ್ಮರಣಾರ್ಥ ಸಂಪ್ಯದಲ್ಲಿ ನಿರ್ಮಿಸಲಾಗಿರುವ ಬಸ್ ತಂಗುದಾಣದಲ್ಲಿ ಅಳವಡಿಸಲಾಗಿರುವ ಕಾರ್ತಿಕ್ ಮೇರ್ಲ ರವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಲಾಯಿತು.
![](https://zoomintv.online/wp-content/uploads/2022/09/WhatsApp-Image-2022-09-03-at-10.33.21-AM-1024x577.jpeg)
![](https://zoomintv.online/wp-content/uploads/2022/09/WhatsApp-Image-2022-09-03-at-10.36.43-AM-1024x682.jpeg)
ಈ ವೇಳೆ ಮೇರ್ಲ ರವರ ಮನೆಯವರು ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.