ಪುತ್ತೂರು : ಬಂಟ್ವಾಳ ತಾಲೂಕಿನ ಅಕ್ಕ ಪಕ್ಕದ ಗ್ರಾಮಗಳಾದ ಕೆದಿಲ,ಕಡೇಶಿವಾಲಯ,ಪೆರ್ನೆ. ಈ ಗ್ರಾಮದ ಸಂಘದ (ಆರ್.ಎಸ್.ಎಸ್) ಸ್ವಯಂಸೇವಕರು ,ಹಿಂದು ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತರು ಜೊತೆಗೂಡಿ ಗ್ರಾಮದಲ್ಲಿ ಸೇವಾ ಕಾರ್ಯಕ್ಕಾಗಿ ಕೆದಿಲದಲ್ಲಿ ಯುವಕೇಸರಿ ಗಡಿಯಾರ,ಕಡೇಶಿವಾಲಯದಲ್ಲಿ ಯುವಶಕ್ತಿ ಕಡೇಶಿವಾಲಯ,ಪೆರ್ನೆಯಲ್ಲಿ ಯುವಸ್ಪಂದನ ಪೆರ್ನೆ ಎನ್ನುವ ಹೆಸರಿನಲ್ಲಿ ಸಂಘಟನೆ ಆರಂಭಿಸಿ ಎಲೆಮರೆಯ ಕಾಯಿಯಂತೆ ಅನೇಕ ಸೇವಾ ಕಾರ್ಯನಡೆಸುತ್ತಾ ಬಂದಿದೆ.
![](https://zoomintv.online/wp-content/uploads/2021/04/WhatsApp-Image-2021-04-16-at-11.52.44-AM-828x1024.jpeg)
ಬಂಟ್ವಾಳ ತಾಲೂಕು ಹಾಗೂ ಹೊರ ತಾಲೂಕುಗಳಾದ ಪುತ್ತೂರು, ಕಡಬ ತಾಲೂಕುಗಳ ನಾಲ್ಕು ಮಕ್ಕಳು ಅನಾರೋಗ್ಯದಿಂದಿರುವುದಾಗಿ, ಅವರಿಗೆ ಚಿಕಿತ್ಸಾವೆಚ್ಚ ಬರಿಸಲು ಸಾಧ್ಯವಾಗದೆ ಕಂಗೆಟ್ಟಿರುವುದನ್ನು ಮನಗಂಡು ಈ ಸಂಘಟನೆಗಳು ಸಹಾಯಹಸ್ತವನ್ನು ಚಾಚಿದೆ ಅದಕ್ಕಾಗಿ ‘ಸೇವಾ ಯಜ್ಞ’ ಎಂಬ ಸಂಕಲ್ಪದೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಅತೀ ದೊಡ್ಡ ಹನುಮಂತನ ವೇಷ (ಅಂದಾಜು 40 KG ತೂಕದ) ಹಾಕಿ ನಾಲ್ಕು ಮಕ್ಕಳ ಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಮುಂದಾಗಿದೆ. ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![](https://zoomintv.online/wp-content/uploads/2021/04/WhatsApp-Image-2021-04-16-at-11.52.43-AM-830x1024.jpeg)