ಬಂಟ್ವಾಳ: ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ವ್ಯಕ್ತಿಯೋರ್ವರು ನೀಡಿದ ದೂರಿನ ಮೇರೆಗೆ ಮಂಗಳೂರು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ನಡ್ಚಾಲು ನಿವಾಸಿ, ರಾಜೇಶ್ (42) ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕಂಪೆನಿಯೊಂದರ ಕೆಲಸವನ್ನು ವರ್ಕ್ ಫ್ರಮ್ ಹೋಮ್ ಆಗಿ ಮಾಡುತ್ತಿದ್ದು, ಪ್ರಸ್ತುತ ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿ ಕಡಿಮೆ ವೇತನ ನೀಡುತ್ತಿರುವುದರಿಂದ ಫೇಸ್ಬುಕ್ ನಲ್ಲಿ ಬಂದಿರುವ ಜಾಹೀರಾತುನಲ್ಲಿ ಇದ್ದ ವಾಟ್ಸಾಪ್ ನಂಬರಿಗೆ ಸಂಪರ್ಕ ಮಾಡಿ ಜಾಬ್ ಬಗ್ಗೆ ವಿಚಾರಿಸಿದಾಗ ಜಾಬ್ ಆಪ್ಲೀಕೇಶನ್ ಫಾರ್ಮ್ ಕಳುಹಿಸಿದ್ದು, ಅದರಲ್ಲಿ ಬಯೋಡೇಟಾ ಹಾಕಿ ಕಳುಹಿಸಿದಾಗ, ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವೀಸಾ ಪ್ರೊಸೆಸಿಂಗ್ ಚಾರ್ಜಸ್, ಕಸ್ಟಮ್ ಕ್ಲಿಯರೆನ್ಸ್ , ಹಾಗೂ ವಿವಿಧ ಚಾರ್ಜಸ್ಗಳಿಗಾಗಿ ಹಣವನ್ನು ಅವರು ಕೇಳಿದಂತೆ ಹಂತ ಹಂತವಾಗಿ ಎಟಿಎಮ್ ಕ್ಯಾಶ್ ಡೆಪಾಸಿಟ್ ಮೆಷಿನ್ ಮುಖಾಂತರ ಪೋನ್ ಪೇ ಮತ್ತು ಪೇಟಿಮ್ ಮುಖಾಂತರ ಅಪರಿಚಿತರ ನೀಡಿರುವ ಬ್ಯಾಂಕ್ ಖಾತೆಗಳಿಗೆ ಕಳುಹಿಸಿದ್ದು, ಹೀಗೆ ಒಟ್ಟು ರೂ. 9,79,000/- ಹಣವನ್ನು ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅಪರಾಧ ಕ್ರಮಾಂಕ : ಅ.ಕ್ರ.06/2023 3 ಕಾನೂನಿನ ಕಲಂ : 66 (D) IT Act & 419, 420 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ..