ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪು ಆರುವಾರ ನಿವಾಸಿ ಮೋನಮ್ಮ ಎಂಬವರ ಮನೆ ಕುಸಿತಗೊಂಡಿದ್ದು, ಬಡ ಕುಟುಂಬ ಸಂಕಷ್ಟ ಪಡುವಂತಾಗಿದೆ.

ಬನ್ನೂರು ಪಂಚಾಯತ್ ಅಧ್ಯಕ್ಷರು ಜಯಾ ರಮೇಶ್ ಹಾಗೂ ಸದಸ್ಯರು ಹಾಗೂ ಬನ್ನೂರು ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ನಾಗೇಶ್ ಟಿ. ಎಸ್ ಹಾಗೂ ತಾಲೂಕು ಕಚೇರಿಯಿಂದ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸರ್ಕಾರದಿಂದ ದೊರೆಯುವ ಶೀಘ್ರ ಪರಿಹಾರದ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಾಗಿ ತಿಳಿಸಿದರು..

