ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ ನಂ: 232/2017 U/S 394.34 ಐಪಿಸಿ (ನ್ಯಾಯಲಯದ ಸಿ ಸಿ ನಂ: 296/2018) ಪ್ರಕರಣದ ವಾರಂಟ್ ನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮ ಮಾವಿನಕಟ್ಟೆ ನಿವಾಸಿ ಮಹಮ್ಮದ್ ಅಶ್ರಪ್ (ನಿಜಾಮ್) ಬಂಧಿತ ಆರೋಪಿ.

ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ ಎಸ್ ಮತ್ತು ಉಪನಿರೀಕ್ಷಕರಾದ ರಾಜೇಶ್ ಕೆ ವಿ ರವರುಗಳ ಮಾರ್ಗದರ್ಶನದಲ್ಲಿ ಮಾ.9 ರಂದು ಪಿಎಸ್ಐ ಧನಂಜಯ ಮತ್ತು ಹೆಚ್.ಸಿ ಹರಿಶ್ಚಂದ್ರ, ಹೆಚ್.ಸಿ ಹಿತೋಷ, ಪಿ.ಸಿ ನವೀನ ರವರು ಮಾವಿನಕಟ್ಟೆ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಈ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯ ವಿರುದ್ಧ ಮಂಗಳೂರು ನಗರ ಪಾಂಡೆಶ್ವರ ಠಾಣೆಯ ಕಲಂ: 302 ಐಪಿಸಿ ಅಡಿ ವಾರೆಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದ.