ಪುತ್ತೂರು: ವ್ಯಕ್ತಿಯೋರ್ವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಲ್ಮರದ ಮುದ್ದೋಡಿ ಬಳಿ ನಡೆದಿದೆ.
ಮೃತರನ್ನು ಸಾಲ್ಮರದ ಮುದ್ದೋಡಿ ನಿವಾಸಿ ವಿಜಯ ರೈ (60) ಎಂದು ಗುರುತಿಸಲಾಗಿದೆ.
ವಿಜಯ ರೈ ರವರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಶಬ್ದ ಕೇಳಿ ಮನೆ ಹೊರಗಿದ್ದ ಪತ್ನಿ ಹಾಗೂ ಮನೆಯವರು ಒಳಗಡೆ ತೆರಳಿ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಅವರು ಮೃತಪಟ್ಟಿದ್ದರೆನ್ನಲಾಗಿದೆ.