ಪುತ್ತೂರು: ಸರಕಾರ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ ಪುತ್ತೂರು ಪೇಟೆಯಲ್ಲಿನ ಮೂರು ವೈನ್ ಶಾಪ್ಗಳ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಬೊಳುವಾರಿನ ಅಲಂಕಾರ್ ವೈನ್ಸ್, ಸ್ಟೇಟ್ ಬ್ಯಾಂಕ್ ಬಳಿಯ ಸಂತೋಷ್ ವೈನ್ ಶಾಪ್, ಮೀನು ಮಾರುಕಟ್ಟೆಯ ಬಳಿಯ ಸ್ವಾಮಿ ವೈನ್ಸ್ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಮೂರು ವೈನ್ ಶಾಪ್ಗಳಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಪಾಲಿಸದೇ, ಅಂಗಡಿಯ ಎದುರುಗಡೆ ಗಿರಾಕಿಗಳಿಗೆ ನಿಲ್ಲಲು ವೃತ್ತಾಕಾರದ ಗುರುತನ್ನು ಹಾಕದೇ ಬಂದ ಗಿರಾಕಿಗಳಿಗೆ ಕೈಗೆ ಹಾಕಲು ಸ್ಯಾನಿಟೈಸರ್ನ್ನು ನೀಡದೆ, ಅಲ್ಲದೇ ಗಿರಾಕಿಗಳು ಮುಖಕ್ಕೆ ಸರಿಯಾಗಿ ಮಾಸ್ಕ್ ನ್ನು ಹಾಕದಿದ್ದರೂ ವ್ಯಾಪಾರ ನಡೆಸಿ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಅಂಗಡಿಯ ಮಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.