ಕಲಬುರಗಿ : ಜಿಲ್ಲೆಯ ಸೇಡಂ ಪಟ್ಟಣದ ಮೂಲದವರಾದ ಮಹೇಶ್ ಮತ್ತು ಬಸವರಾಜ್ ಎಂಬ ಯುವಕರು ಸೇರಿಕೊಂಡು ನಕಲಿ ಪಿಸ್ತೂಲ್ ಹಿಡಿದು ರೀಲ್ಸ್ ಜೊತೆಗೆ ಫೋಟೋ ಶೂಟ್ ಮಾಡಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹವಾ ಮೆಂಟೈನ್ ಮಾಡಲು ಪೋಸ್ಟ್ ಮಾಡಿದ್ದಾರೆ. ಪಿಸ್ತೂಲ್ ಹಿಡಿದು ರೀಲ್ಸ್ ಮಾಡಿದ ವೀಡಿಯೋಗಳನ್ನ ನೋಡಿದ ಸಾರ್ವಜನಿಕರು, ಯುವಕರ ಹುಚ್ಚಾಟ ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದರು. ಇದನ್ನ ನೋಡಿದ ಪೊಲೀಸರು, ರೀಲ್ಸ್ ಮಾಡಿದ ಮಹೇಶ್ ಮತ್ತು ಬಸವರಾಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನೂ ಸೇಡಂ ಪಟ್ಟಣದ ಇಂದಿರಾನಗರ ಬಡಾವಣೆಯ ನಿವಾಸಿಗಳಾದ ಮಹೇಶ್ ಮತ್ತು ಬಸವರಾಜ್ ಕಾಲೇಜು ಮುಗಿಸಿ, ಕೆಲಸ ಹುಡುಕದೇ ಬಿಡಾಡಿ ಥರ ಓಡಾಡಿಕೊಂಡು ಶೋಕಿ ಜೀವನ ಸಾಗಿಸುತ್ತಿದ್ದರು.
ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಲು ಹೋಗಿದ್ದ ಈ ಯುವಕರನ್ನ ಠಾಣೆಗೆ ಕರೆಯಿಸಿ ಪೊಲೀಸರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ಇಬ್ಬರು ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿ ಮುಂದೆ ಈ ರೀತಿಯಲ್ಲಿ ಹುಚ್ಚುಚ್ಚು ರೀಲ್ಸ್ ಮಾಡಿದ್ರೆ ಜೈಲೂಟ ಗ್ಯಾರಂಟಿ ಎಂದು ಖಡಕ್ ಆಗಿ ವಾರ್ನ್ ಮಾಡಿ ಕಳುಹಿಸಿದ್ದಾರೆ.




























