ಪುತ್ತೂರು : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಕಾರಿನಲ್ಲಿ ಬಂದು ಹಲ್ಲೆ ನಡೆಸಿರುವುದಾಗಿ ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಿಂಜೆ ನಿವಾಸಿ ಮಹಮದ್ ಜುಬೇರ್ ನೀಡಿರುವ ದೂರಿನ ಮೇರೆಗೆ ತಿಂಗಲಾಡಿ ನಿವಾಸಿ ಸಿದ್ಧಿಕ್ ಅನ್ಸಾರ್, ಕೆಮ್ಮಿಂಜೆ ನಿವಾಸಿ ಶಮೀರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಮದ್ ಜುಬೇರ್ ಮಾ.28 ರಂದು ರಾತ್ರಿ ಸಮಯದಲ್ಲಿ ತಂದೆಯೊಂದಿಗೆ ಮನೆಗೆ ನಡೆದುಕೊಂಡು ಹೋಗುವಾಗ ಕೆಮ್ಮಿಂಜೆ ಗ್ರಾಮದ ಮಣ್ಣಾಪು ಮೊಟ್ಟೆತ್ತಡ್ಕ ಎಂಬಲ್ಲಿ ಸಿದ್ದಿಕ್ ಅನ್ಸಾರ್ ಹಾಗೂ ಶಮೀರ್ ಎಂಬವರು ಕಾರಿನಲ್ಲಿ ಬಂದು ಜುಬೇರ್ ಹಾಗೂ ಅವರ ತಂದೆಯನ್ನು ಅಡ್ಡಗಟ್ಟಿ ತಡೆದು ಅವ್ಯಾಚವಾಗಿ ಬೈದಿದ್ದು, ಬಳಿಕ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಸದ್ರಿ ಸ್ಥಳದಿಂದ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಅ ಕ್ರ ನಂ 31-2024. ಕಲಂ:341,504, 323, 324,506 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.